ಬುಧವಾರ, ಫೆಬ್ರವರಿ 29, 2012

ಸರಕಾರದ ಮಿಂಬಲೆಗಳ ಮೇಲೆ ಕನ್ನಡದ ತಂಗಾಳಿ ಬೀಸಲಿ

ಕರ್ನಾಟಕ ಸರಕಾರದ ಮುಕ್ಯಮಂತ್ರಿಗಳು ವಾರ್ತಾ ಇಲಾಕೆಗೆ ಸೇರಿದ(http://karnatakavarthe.org/) ಮಿಂಬಲೆಯನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಎಲ್ಲಾ ಇಲಾಕೆಯ ಮಿಂಬಲೆಗಳನ್ನು ೧೫ ದಿನದೊಳಗೆ, ಎಲ್ಲಾ  ಮಾಹಿತಿಯೂ ಹಾಕಿ ಇವತ್ತಿನದಾಗಿಸಲು ಗಡುವು ನೀಡಿದ್ದಾರೆ. ಈ ಗಡುವಿನಿಂದ ಹಲವಾರು ಇಲಾಕೆಯ ಸತ್ತಂತಿರುವ ಮಿಂಬಲೆಗಳಿಗೆ ಜೀವ ಬಂದರೆ ನಿಜಕ್ಕು ನಾಗರೀಕರಿಗೆ ಸರಕಾರದ ಇಲಾಕೆಗಳ ಕೆಲಸಗಳ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗುತ್ತೆ.ಮುಕ್ಯ ಮಂತ್ರಿಗಳು ತಂತ್ರಗ್ನಾನದ ಬಳಕೆಯನ್ನು ಮುಕ್ಯವೆಂದು ಪರಿಗಣಿಸಿ ಈ ರೀತಿಯ ಗಡುವು ನೀಡಿರುವುದು ಮೆಚ್ಚುವಂತಹದ್ದ್ದು.


ಆದರೆ ಕರ್ನಾಟಕ ಸರಕಾರದ ಆಡಳಿತ ಬಾಶೆ ಕನ್ನಡವಾದರೂ ಮತ್ತು  ಮಿಂಬಲೆಯಲ್ಲಿ ಕನ್ನಡದ ಬಳಕೆ ಸುಲಬವಾಗುವಶ್ಟು  ತಂತ್ರಗ್ನಾನ ಬೆಳೆದಿದ್ದರೂ ಇಂದಿಗೂ ಸರಿ ಸುಮಾರು ಎಲ್ಲಾ ಸರಕಾರಿ ಇಲಾಕೆಯ ಮಿಂಬಲೆಗಳಲ್ಲಿ ಕನ್ನಡದ ಬಳಕೆ ಸಮರ್ಪಕವಾಗಿ ಆಗಿಲ್ಲ. ಇದೇ ರೀತಿಯಲ್ಲಿ ಮತ್ತೆ ವಾರ್ತಾ ಇಲಾಕೆಯ ಮಿಂಬಲೆಯಲ್ಲೂ ಆಗಿದೆ. ಕೆಲವು ಇಲಾಕೆಗಳ ಮಿಂಬಲೆಯಂತೆಯೇ, ವಾರ್ತಾ ಇಲಾಕೆಯ ಹೊಸ ಮಿಂಬಲೆಯಲ್ಲಿ ಕನ್ನಡದ ಆಯ್ಕೆ ಇದ್ದರೂ  ಮುಕ್ಯವಾದ ಮಾಹಿತಿಯುಳ್ಳ ಪುಟಗಳಲ್ಲೇ ಕನ್ನಡ ಇಲ್ಲವಾಗಿದೆ. ಇದೆಲ್ಲಕ್ಕೂ ಮುಕ್ಯವಾಗಿ ಆಡಳಿತದಲ್ಲಿ ಕನ್ನಡ ನಿಯಮಮಾಡಿರುವ ಸರಕಾರದ ಮಿಂಬಲೆಯಲ್ಲಿ (http://www.karnataka.gov.in/)ಕನ್ನಡ ಮೊದಲಬಾಶೆಯಾಗಿಲ್ಲದಿರುವುದು ದುರದ್ರುಶ್ಟಕರ! ಇವೆಲ್ಲವನ್ನು ನೊಡಿದರೆ ಸರಕಾರ ಈ ನಾಡಿನ  ಜನರಿಗಾಗಿ ಮಿಂಬಲೆಗಳನ್ನು ನಿರ್ಮಿಸುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ.


ತಂತ್ರಗ್ನಾನ ಮತ್ತು ತಂತ್ರಗ್ನಾನದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಸಿದರೆ ಆಡಳಿತನ್ನು  ಪರಿಣಾಮಕಾರಿಯಾಗಿಸಬಹುದು. ಕರ್ನಾಟಕ ಸರಕಾರದ ಮಿಂಬಲೆಯ ಪಲಾನುಬಾವಿಗಳು ಹೆಚ್ಚು ಜನ ಕನ್ನಡಿಗರೇ ಹೊರೆತು ಬೇರೆಯವರಲ್ಲ.  ಸರಕಾರ ಇಲಾಕೆಗಳ ಮಾಹಿತಿಯನ್ನು ಜನರಿಗೆ ತಲುಪಿಸಲು ಕನ್ನಡ ಬಾಶೆಯ ಬಳಕೆ ಅತ್ಯವಶ್ಯಕ ಎನ್ನುವುದನ್ನು ತಿಳಿಯಬೇಕು, ಅಲ್ಲೊಂದು ಇಲ್ಲೊಂದು ಪುಟಗಳಲ್ಲಿ  ಕನ್ನಡದ ಬಳಕೆ ಮಾಡುವುದರ ಬದಲು ಎಲ್ಲಾ ಮಾಹಿತಿಯೂ ಕನ್ನಡದಲ್ಲಿ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ಈಗಿನ ಮಿಂಬಲೆ ಗಳಲ್ಲಿ ಇಂಗ್ಲೀಶ್ ಮೊದಲ ಬಾಶೆಯಾಗಿದ್ದು, ಇದು ಬದಲಾಗಿ ರಾಜ್ಯ ಸರಕಾರದ ಎಲ್ಲಾ ಮಿಂಬಲೆ ಗಳಲ್ಲೂ ಕನ್ನಡವೇ ಮೊದಲ ಬಾಶೆಯನ್ನಾಗಿಸುವುದರ ಮೂಲಕ ಹೆಚ್ಚು ಜನರನ್ನು ತಲುಪಲು ಸಾದ್ಯ. ಮತ್ತು ಆಡಳಿತದಲ್ಲಿ ಪಾರಸರ್ಶಕತೆಯನ್ನು ತರಲು ಸಾದ್ಯ.

ಮಂಗಳವಾರ, ಫೆಬ್ರವರಿ 28, 2012

BMTCಯ ಅದಿಕಾರಿಗಳ ಕನ್ನಡದ ಬಗೆಗಿನ ಕೀಳರಿಮೆ ಕೊನೆಗಾಣಲಿ

ಕಳೆದ ವಾರ ನನ್ನ ಸ್ನೇಹಿತರೊಬ್ಬರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ತೆಗೆ ಪತ್ರ ಬರೆದು ಬಸ್ಸಿನಲ್ಲಿ ಕನ್ನಡದಲ್ಲಿ  ದಾರಿಸೂಚಿಯನ್ನು ಬಳಸಲು ಆಗ್ರಹಿಸಿದ್ದರು ಅದಕ್ಕೆ ಪ್ರತಿಕ್ರಿಯೆಯಾಗಿ ಸಂಸ್ತೆಯವರು ಬರೆದಿರುವ ಉತ್ತರ ಕೆಳಗಿನಂತಿದೆ.
Manager (O) <ctmobmtc@gmail.com> wrote:

Dear Harsha
Your suggestion has been taken well. The information displayed in the signage board (except in BIAL services)  is in  Kannada and in English  language,  to facilitate the kanndigas and also non kannadiga commuters. If any left over will be corrected.

Looking forward for your continued patronage

With regards
CTM(O),
BMTC

ಈ ಪತ್ರದ ಸಾರಾಂಶ ಏನಂದ್ರೆ  ಬೆಂಗಳೂರಿನ ಒಳಗೆ ಸಂಚರಿಸುವ ಮಾರ್ಗದ ದಾರಿಸೂಚಿಯಲ್ಲಿ ಕನ್ನಡ ಮತ್ತು ಇಂಗ್ಲೀಶ್ ಬಳಸ್ತಾರಂತೆ ಆದ್ರೆ ಬೆಂಗಳೂರು ಅಂತರಾಶ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ಸಿನಲ್ಲಿ ಕನ್ನಡ ಬಳಸಲ್ವಂತೆ!



ಬೆಂಗಳೂರಿನಲ್ಲಿ ಹತ್ತಾರು ವರ್ಶಗಳಿಂದ ನೆಲೆಸಿರುವ ಕನ್ನಡಿಗರು ಕನ್ನಡ ಕಲಿತಿರ್ತಾರೆ ಅತವಾ ಕನ್ನಡ ಕಲಿತಾರೆ ಇದಕ್ಕಾಗಿ ಬೆಂಗಳೂರಿನ ಒಳಗೆ ಸಂಚರಿಸುವ ಬಸ್ಸುಗಳಲ್ಲಿ ಕನ್ನಡವೇ ಸಾಕಾಗುತ್ತಿತ್ತು ಇಲ್ಲಿ ಇಂಗ್ಲೀಶ್ ನ ಬಳಕೆ ಬೇಕಾಗೇ ಇರಲಿಲ್ಲ.ಇನ್ನು ವಿಮಾನ ನಿಲ್ದಾಣದ ವಿಶಯಕ್ಕೆ ಬಂದ್ರೆ ಪ್ರವಾಸಿಗರ ಅನುಕೂಲಕ್ಕೆ ಅಂತ  ಇಂಗ್ಲೀಶ್ ಅನ್ನು ಬಳಸಬಹುದಿತ್ತೇ ಹೊರೆತು ಕನ್ನಡ ಬಳಸೋದೇ ಇಲ್ಲ ಅನ್ನೊದು ಇವರಿಗೆ ಕನ್ನಡದ ಬಗೆಗಿನ ಕೀಳರಿಮೆಯನ್ನು ಎತ್ತಿ ತೋರಿಸುತ್ತಿದೆ. ಜಗತ್ತಿನಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ನಗರಗಳಾದ ಪ್ಯಾರಿಸ್ ನಿಂದ ಹಿಡಿದು ಟೋಕಿಯೋ ವರೆಗೆ ಅತವಾ ನಮ್ಮ ದೇಶದ ಚನೈ ಮುಂಬೈ ಎಲ್ಲೇ‌ಹೋದ್ರು ನಗರದ ವಿವಿದ ಬಡಾವಣೆಗೆ ಸಂಚರಿಸುವ ಬಸ್ಸುಗಳಲ್ಲಿ ಸ್ತಳೀಯ ಬಾಶೆಯಿರುತ್ತೆ ಹೊರೆತು ಇಂಗ್ಲೀಶ್ ಬಾಶೆಯ ಬಳಕೆ ಇರುವುದಿಲ್ಲ ಜೊತೆಗೆ ವಿಮಾನ ನಿಲ್ದಾಣ ಅತವಾ ಹೆಚ್ಚು ಪ್ರವಾಸಿಗರು ಓಡಾಡುವ   ಬಸ್ಸುಗಳಲ್ಲಿ ಪ್ರವಾಸಿಗರಿಗೆ ಸಹಾಯವಾಗಲಿ ಅಂತ ಇಂಗ್ಲೀಶ್ ಬಳಸಿರುತ್ತಾರೆ ಹೊರೆತು ತಮ್ಮ ಬಾಶೆಯನ್ನು ಬಿಟ್ಟು ಇಂಗ್ಲೀಶ್ ಬಳಕೆ ಮಾಡಿರಲ್ಲ.

ಇವರ ಉತ್ತರ ನೊಡಿದ್ರೆ ಇವರಿಗೆ ಕನ್ನಡ ಬಳಕೆ ಮಾಡಬಾರದು ಎನ್ನುವ ಮನಸ್ತಿತಿಗಿಂತ ಕನ್ನಡದ ಬಗ್ಗೆ  ಕೀಳರಿಮೆಯ ಮನಸ್ತಿತಿ ಎದ್ದು ಕಾಣಿಸುತ್ತೆ. ಇದೇ ಕೀಳರಿಮೆಯಿಂದಲೇ ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ಸುಗಳಲ್ಲಿ ಕನ್ನಡದ ಹಾಡುಗಳನ್ನು ಹಾಕ್ತಿಲ್ಲ, ವಿಮಾನ ನಿಲ್ದಾಣದ ಬಸ್ಸಿನ ದಾರಿಸೂಚಿ ಕನ್ನಡ ಬಳಸುತ್ತಿಲ್ಲ. ಇವರು ಕನ್ನಡ ಯಾವುದುಕ್ಕು ಅಹ೯ವಲ್ಲದ್ದು ವಿಮಾನ ಏರೋಕ್ಕೆ ಇಂಗ್ಲೀಶ್ ಕಲಿತಿರಬೇಕು ಅಂತ ತಿಳಿದಿದ್ದಾರೆನೋ ಪಾಪ! ಇನ್ನು ೪ ರಿಂದ ೫% ಕನ್ನಡ ಬಾರದವರಿಗೆ ಅನುಕೂಲ ಮಾಡಿಕೊಡುವ ಬರದಲ್ಲಿ ೯೫% ಕನ್ನಡಿಗರಿಗೆ ಅನ್ಯಾಯ ಆಗ್ತಿದೆ ಅಂತನೂ ಗೊತ್ತುಮಾಡಿಕೊಳ್ಳೋಕ್ಕೆ ಆಗದ ಪರಿಸ್ತಿತಿಯಲ್ಲಿ ಅದಿಕಾರಿಗಳು ಇದ್ದಹಾಗಿದೆ. ಇವರ ಕನ್ನಡದ ಬಗೆಗಿನ ಕೀಳರಿಮೆಯನ್ನು ಹೋಗಲಾಡಿಸಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಮಾಡುವ ಕೆಲಸ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ.

ಮಂಗಳವಾರ, ಫೆಬ್ರವರಿ 21, 2012

ಈ ಬಸ್ಸು ಎಲ್ಲಿಗೆ ಹೋಗುತ್ತದೆ?

ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಸಂಸ್ತೆಯು ತನ್ನ ಸಂಸ್ತೆಯ ವೋಲ್ವೋ ಬಸ್ಸೇ ಅಲ್ಲದೇ ಎಲ್ಲಾ ತರದ  ಬಸ್ಸುಗಳಿಗೂ ಎಲೆಟ್ರಾನಿಕ್ ದಾರಿಸೂಚಿಗಳನ್ನು  ಹಾಕುತ್ತಿದೆ.   ಸಂಸ್ತೆಯು ಹಲವಾರು ರೀತಿಯಲ್ಲಿ ತಂತ್ರಗ್ನಾನವನ್ನು ಬಳಕೆ ಮಾಡುತ್ತಿರುವುದು ನಿಜಕ್ಕೂ ಸಂತೋಶದ ವಿಶಯವೇ.

ಆದರೆ ಈ ಸಂತೋಶದ ವಿಶಯ ಹಾಗಿರಲಿ,  ತಾವೋಂದು ವಿಶಯವನ್ನು ಗಮನಿಸಿ ನೋಡಿ. ಈ ದಾರಿಸೂಚಿಗಳಲ್ಲಿ, ಕೆಲವೇ ಕೆಲವೊಮ್ಮೆ ಕನ್ನಡದ ಮಾಹಿತಿ ನೆಪಮಾತ್ರಕ್ಕೆ ಬಂದು ಹೋಗುತ್ತದೆ.  ಕೆಲವು ಕಡೆಗಳಲ್ಲಿ ಕನ್ನಡ ಇಲ್ಲದಿರುವುದು ಸಹ ಕಾಣಸಿಗುತ್ತದೆ. ಈ ಎಲೆಟ್ರಾನಿಕ್ ದಾರಿ ಸೂಚಿಯಲ್ಲಿ ಕನ್ನಡವನ್ನು ಹೆಸರಿಗೆ ಮಾತ್ರ ಹಾಕಲಾಗಿದ್ದು ಇಂಗ್ಲೀಶ್ ಗೆ ಮೊದಲ ಸ್ತಾನ ನೀಡಲಾಗಿದೆ.

ಸಂಸ್ತೆಯು  ತಂತ್ರಗ್ನಾನದ ಬಳಕೆಯ ಹೆಸರಲ್ಲಿ ಕನ್ನಡದ ಬಳಕೆಯನ್ನು ಕಡಿಮೆ ಮಾಡುತ್ತಿರುವುದು ನಿಜಕ್ಕೂ ಆತಂಕ ಉಂಟುಮಾಡುವ ಹಾಗೆ ಮಾಡಿದೆ. ಬಿಎಂಟಿಸಿ ಸಂಸ್ತೆ ವಲಸಿಗರಿಗಾಗಿಯೇ ತನ್ನ ವ್ಯವಸ್ತೆಗಳನ್ನು ರೂಪಿಸಿ ಕನ್ನಡದ ಜಪ ಮಾಡುವಂತೆ ನಟಿಸುತ್ತಿದೆ.ಮುಂದಿನ ದಿನಗಳಲ್ಲಿ ಎಲ್ಲಾ ಬಸ್ಸುಗಳಿಗೂ ಈ ತಂತ್ರಗ್ನಾನವನ್ನು ಅಳವಡಿಕೆಯಾಗುವುದು ಕಂಡಿತ. ಎಲ್ಲೆಡೆ ಇಂಗ್ಲೀಶ್ ಗೆ ಪ್ರಾಮುಕ್ಯತೆ ನೀಡಿ ಕನ್ನಡವನ್ನು ಕಡೆಗಣಿಸಿದ್ದೇ ಆದಲ್ಲಿ ಕನ್ನಡಿಗರ ಕತೆ ಅದೋಗತಿಯೇ!

ಈಗಲಾದರೂ ಕನ್ನಡಿಗರು ಎಚ್ಚೆತ್ತು ಪ್ರಶ್ನೆಸದಿದ್ದರೆ ಮುಂದೊಂದು ದಿನ ಈ ಬಸ್ಸು  ಯಾವ ಬಡಾವಣೆಗೆ ಹೋಗುತ್ತದೆ ಎನ್ನುವುದನ್ನು ವಲಸಿಗ ಸಹ ಪ್ರಯಾಣಿಕರಿಗೆ ಪ್ರಶ್ನೆ ಕೇಳಬೇಕಾದ ಪರಿಸ್ತಿತಿ ಬಂದರೆ ಕನ್ನಡಿಗರು ಆಶ್ಚರ್ಯ ಪಡಬೇಕಾಗಿಲ್ಲ.