ಸೋಮವಾರ, ಜುಲೈ 30, 2012

ಕನ್ನಡದಲ್ಲಿ ರಶೀತಿ ಸಿಗುವಂತಾಗಲಿ

ಬೆಂಗಳೂರು ಟ್ರಾಪಿಕ್ ಪೋಲೀಸರು ಮೋಟಾರು ವಾಹನ ಕಾಯಿದೆಯನ್ನು ಉಲ್ಲಂಗಿಸಿದಕ್ಕೆ ದಂಡ ಕಟ್ಟಿದಾಗ ಕೊಡುವ ರಶೀತಿಯಲ್ಲಿ ಕನ್ನಡ ಇಲ್ಲದ ಬಗ್ಗೆ ಟ್ರಾಪಿಕ್ ಪೋಲೀಸರಿಗೆ ಹಲವಾರು ಬಾರಿ ಪತ್ರವನ್ನು ಬರೆದು  ಕನ್ನಡದಲ್ಲಿ ರಶೀತಿ ನೀಡದಿರುವುದು ಕರ್ನಾಟಕ ಸರಕಾರ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪರಿಣಾಮಕಾರಿಗಾಗಿ ರೂಪಿಸಿರುವ ಆಡಳಿತ ಬಾಶೆಯ ನಿಯಮದ ಉಲ್ಲಂಗನೆ ಎನ್ನುವುದನ್ನು ತಿಳಿಸಿ, ಕನ್ನಡದಲ್ಲಿ ರಶೀತಿಯನ್ನು ನೀಡುವಂತೆ ಕೆಲವು ಗೆಳೆಯರೆಲ್ಲರೂ ಒತ್ತಾಯಿಸಿದೆವು. ಆದರೆ ಅವರಿಂದ ಯಾವುದೇ ಸಮಂಜಸವಾದ ಉತ್ತರ ಸಿಗದಿದ್ದರಿಂದ, ಆಡಳಿತ ಬಾಶೆಯ ಉಲ್ಲಂಗನೆಯಾಗಿರುವುದರ ಆದಾರದ ಮೇಲೆ ಕನ್ನಡ ಅಬಿವ್ರುದ್ದಿ ಪ್ರಾದಿಕಾರಕ್ಕೆ ದೂರೊಂದನ್ನು ನೀಡಿದ್ದೆವು. ನಮ್ಮ ದೂರಗೆ ಪ್ರತಿಯಾಗಿ ಅಬಿವ್ರುದ್ದಿ ಪ್ರಾದಿಕಾರ ಸಾರಿಗೆ ಸಚಿವರಾದ ಅಶೋಕ್ ರವರಿಗೆ ಪತ್ರಬರೆದು ಆಡಳಿತ ಬಾಶೆಯ ನಿಯಮದ ಉಲ್ಲಂಗನೆ ಬಗ್ಗೆ ಗಮನಸೆಳೆದಿತ್ತು.  
ಇದೀಗ ಅಬಿವ್ರುದ್ದಿ ಪ್ರಾದಿಕಾರದ ಪತ್ರಕ್ಕೆ ಪ್ರತಿಯಾಗಿ ಸಾರಿಗೆ ಇಲಾಕೆಯು ಕೂಡ ಬೆಂಗಳೂರು ಟ್ರಾಪಿಕ್ ಕಮಿಶನರ್ ರವರಿಗೆ ಪತ್ರ ಬರೆದು ಕನ್ನಡದ ರಶೀತಿ ಸಿಗುವಂತೆ ಮಾಡಬೇಕೆಂದು ತಿಳಿಸಿದ್ದಾರೆ.
ತಂತ್ರಗ್ನಾನ ಇಶ್ಟು ಮುಂದುವರೆದರೂ ಸಹ ಅದಿಕಾರಿಗಳು ಕನ್ನಡದ ಅನುಶ್ಟಾನದ ವಿಶಯದಲ್ಲಿ ಗಮನಹರಿಸದಿರುವುದು ನಿಜಕ್ಕು ದುರದ್ರುಶ್ಟಕರ.  ಕನ್ನಡವನ್ನು ಬಿಟ್ಟು ಪರಿಣಾಮಕಾರಿ ಮತ್ತು ಪಾರದರ್ಶಕ ಆಡಳಿತ ಅಸಾದ್ಯ ಎನ್ನುವುದನ್ನು ಅದಿಕಾರಿಗಳು ಅರಿತುಕೊಳ್ಳಲಿ ಇನ್ನು ಮುಂದೆಯಾದಾರೂ ಕನ್ನಡದಲ್ಲಿ ರಶೀತಿ ಸಿಗುವಂತಾಗಲಿ.