ಶನಿವಾರ, ಮೇ 4, 2013

ಪ್ರಾದೇಶಿಕ ಪಕ್ಷಕ್ಕಿರಲಿ ನಿಮ್ಮ ಮತ

ಪ್ರಾದೇಶಿಕ ಚಿಂತನೆಯು ಕರ್ನಾಟಕ ರಾಜ್ಯದಲ್ಲಿ ಇಲ್ಲದಿರುವುದರ ಪರಿಣಾಮವಾಗಿ ಹಲವಾರು ರೀತಿಯಲ್ಲಿ ಕನ್ನಡ-ಕರ್ನಾಟಕ-ಕನ್ನಡಿಗರು ಅನ್ಯಾಯಕ್ಕೆ ಒಳಗಾಗಿದ್ದೇವೆ..ರಾಷ್ಟ್ರೀಯ ಪಕ್ಷಗಳಿಗೆ ಕನ್ನಡ ಕನ್ನಡಿಗ ಕರ್ನಾಟಕ ಪ್ರತಿ ಬಾರಿಯೂ ಎರಡನೇಯ ಆದ್ಯತೆ ಪಡೆದುಕೊಳ್ಳುತ್ತಿರುವು ಹಲವಾರು ವಿಶಯಗಳ ಮೂಲಕ ಸಾಭೀತಾಗಿದೆ.

ಭಾರತದ ಒಕ್ಕೂಟದಲ್ಲಿ ಕರ್ನಾಟಕಕ್ಕೆ ದೊರಕ ಬೇಕಾದ ನ್ಯಾಯವನ್ನು ದೊರೆಕಿಸಿಕೊಡಬೇಕಿದೆ, ಕನ್ನಡ ಗ್ರಾಹಕರಿಗೆ ಅನುಕೂಲವಾಗುವಂತೆ ಗ್ರಾಹಕ ಹಕ್ಕು ಕಾಯಿದೆಗಳು ಬದಲಾಗಬೇಕಿದೆ ಮತ್ತು ಭಾರತದ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನ ಮಾನ ದೊರೆಕಿಸುವುದರ ಜೊತೆಗೆ ಕನ್ನಡ-ಕರ್ನಾಟಕ-ಕನ್ನಡಿಗರ ಏಳಿಗೆಗೆ ಹಲವು ಬದಲಾವಣೆಗಳು ಆಗಬೇಕಿದೆ ಈ ಎಲ್ಲಾ ಬದಲಾವಣೆಗಳು ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯವಿದೆ..ಬೇರೆ ಚುನಾವನೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.

ನಮ್ಮ ಮತ ದಾನದ ಹಕ್ಕಿನ ಮೂಲಕ ಕರ್ನಾಟಕ ಕೇಂದ್ರಿತ ಪ್ರಾದೇಶಿಕ ಪಕ್ಷಗಳಿಗೆ ಮತ ನೀಡೊಣ..