ಶುಕ್ರವಾರ, ಸೆಪ್ಟೆಂಬರ್ 30, 2011

ಮೈಸೂರು ದಸರ ನಾಡ ಹಬ್ಬನ?

ಮೈಸೂರು ದಸರಾ ೪೦೦ ಕ್ಕು ಹೆಚ್ಚು ಆಚರಣೆಗಳನ್ನ ಕಂಡಿದ್ದು ಕೆಲವು ವರ್ಶಗಳಿಂದ ಕರ್ನಾಟಕ ಸರಕಾರ ನಾಡ ಹಬ್ಬವನ್ನಾಗಿ ಆಚರಿಸುತ್ತಿದೆ. ದಸರಾ ಸಮಯದಲ್ಲಿ ವಿದೇಶೀ ಪ್ರವಾಸಿಗರೂ ಸೇರಿದಂತೆ ಲಕ್ಶಾಂತರ ಪ್ರವಾಸಿಗರು ಮೈಸೂರು ದಸರದಲ್ಲಿ ಬಾಗವಹಿಸುತ್ತಾರೆ. ದಸರಾದಲ್ಲಿ ನಮ್ಮ ಕಲೆ ಸಂಸ್ಕ್ರುತಿ ಬಾಶೆಯನ್ನ ಎತ್ತಿ ಹಿಡಿಯಲು ಸರಕಾರ ಕೋಟ್ಯಾಂತರ ಹಣ ಬಳಸುತ್ತೆ.


ಇತ್ತೀಚಿನ ದಿನಗಳಲ್ಲಿ ದಸರದಲ್ಲಿ ಯುವ ದಸರಾ, ಮಕ್ಕಳ ದಸರಾ, ಚಲನಚಿತ್ರೋತ್ಸವ,ಕುಸ್ತಿ, ಗ್ರಾಮೀಣ ದಸರಾ, ಆಹಾರ ಮೇಳ ಹೀಗೆ ಹಲವಾರು ರೀತಿಯ ಕಾರ್ಯಕ್ರಮಗಳ ಮೂಲಕ ಹೆಚ್ಚು ಹೆಚ್ಚು ಜನರು ದಸರಾದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಕಾರ್ಯಕ್ರಮಗಳನ್ನ ರೂಪಿಸಿದೆ. ಆದರೆ..........ಈ ಕಾರ್ಯಕ್ರಮಗಳಲ್ಲಿ ಆಗುತ್ತಿರೋದೇನು?????

ನಾಡ ಹಬ್ಬದಲ್ಲಿ ನಮ್ಮ ನಾಡಿನ ಬಾಶೆ ಕಲೆ ಸಂಸ್ಕ್ರುತಿಯನ್ನ ಎತ್ತಿ ಹಿಡಿಯೋ ಕೆಲ್ಸ ಆಗಬೇಕಿತ್ತು ಆದ್ರೆ ನಮ್ಮ ನಾಡಿನದ್ದಲ್ಲದ ಕಲೆ, ಬಾಶೆ, ಸಂಸ್ಕ್ರುತಿಯನ್ನ ಎತ್ತಿ ಕುಣಿಸುತ್ತಿದ್ದಾರೆ. ಯುವ ದಸರಾದಿಂದ ಹಿಡಿದು ಅನೇಕ ದಸರಾ ಕಾರ್ಯಕ್ರಮಗಳಲ್ಲಿ ಎಲ್ಲಿಹೋದರಲ್ಲಿ ಸಿಗೋದು ಹೊರನಾಡಿನ ಕಲೆ ಸಂಸ್ಕ್ರುತಿಯ ಮೇಲುಗೈ !!!! ಇದು ಯಾಕೆ ಎಂದು ಕೇಳಿದ್ದಕ್ಕೆ ಪೇಸ್ ಬುಕ್ಕಿನಲ್ಲಿ ಇವರಿಂದ ಬಂದ ಉತ್ತರವನ್ನ ನೊಡಿ-

Mysore Dasara 2011 How come taste/likes of people appearing for these shows and also Music show at Palace are appears to be different from views/openions expressed here? If they haven't liked a show by a non-kannadiga, they would have stayed home! The programmes are not ad-hoc but they are published in advance...


ಮೈಸೂರು ದಸರ ನೊಡಲು ಬರುವ ಪ್ರವಾಸಿಗರು ನಮ್ಮ ನಾಡಿನ ಕಲೆ ಸಂಸ್ಕ್ರುತಿಯ ಪರಿಚಯ ಪಡೆಯಲು ಬರುತ್ತಾರಲ್ಲವೇ? ಈ ಪ್ರವಾಸಿಗರಿಗೆ ಸರಕಾರ ದಸರಾದ ಮೂಲಕ ಪರಿಚಯಿಸಲು ಹೊರಟಿರುವುದು ಯಾವ ಸಂಸ್ಕ್ರುತಿಯನ್ನ? ಯಾವ ಬಾಶೆಯನ್ನ? ಯಾವ ನಾಡಿನ ಕಲೆಗಳನ್ನ???ಇವರು ಮೇಲೆ ಹೇಳಿರೋದು ನಿಜವಾಗಿದ್ದಲ್ಲಿ ಸರಕಾರ ದಸರಾವನ್ನ ನಾಡ ಹಬ್ಬವಾಗಿ ಆಚರಿಸಿದ್ದರ ಅವಶ್ಯಕತೆಯೇನಿದೆ? ದಸರಾಕ್ಕೆ ಜನಿಫ಼ರ್ ಲೋಪೇಸ್ ಕರೆಸಿದ್ರೆ ಅತವಾ ಇನ್ಯಾರನ್ನೊ ಕರೆಸಿ ಕ್ಯಾಬರೆ ನಡೆಸಿದ್ರೆ ಅತವಾ ಕುಸ್ತಿ ಪಂದ್ಯಾವಳಿ ಬದಲಿಗೆ WWF championship ನಡೆಸಿದ್ರೆ ಅತವಾ ಜಂಬು ಸವಾರಿ ಜೊತೆಗಿನ ಸ್ತಬ್ದ ಚಿತ್ರಗಳ ಬದಲಿಗೆ ಮಾಡೆಲ್ ಗಳ ಕ್ಯಾಟ್ ವಾಕ್ ನಡೆಸಿದ್ರೆ ಇನ್ನು ಹೆಚ್ಚು ಜನ ಬರಬಹುದೇನೋ..... ಆದ್ರೆ ನಾಡಹಬ್ಬವನ್ನಾಗಿ ಆಚರಿಸೋ ಸರಕಾರಕ್ಕೆ ಯಾವ ಕಾರ್ಯಕ್ರಮ ನಡೆಸುವ ಮೂಲಕ ನಮ್ಮ ಸಂಸ್ಕ್ರುತಿ ಕಲೆ ಬಾಶೆಯನ್ನ ಎತ್ತಿಹಿಡಿಯಬೇಕು ಎನ್ನುವುದು ಗೊತ್ತಿರಬೇಕಲ್ವೇ?

ನಮ್ಮ ನಾಡಿಗೆ ಸಂಬಂದಪಡದ ಕಾರ್ಯಕ್ರಮಗಳನ್ನ ನಡೆಸುವ ಮೂಲಕ ಸರಕಾರ ಪ್ರವಾಸಿಗರಿಗೆ ಬೇರೆ ನಾಡಿನ ಕಲೆ, ಸಂಸ್ಕ್ರುತಿ ಮತ್ತು ಬಾಶೆಯನ್ನ ಪರಿಚಯಿಸಲು ಮತ್ತು ಅವಕ್ಕೆ ಮಾರುಕಟ್ಟೆ ನಿರ್ಮಿಸಲು ಹೊರಟಿರೋದು ಸರಿಯೇ??? ಒಮ್ಮೆ ಯೋಚಿಸಿ...........

ಸೋಮವಾರ, ಸೆಪ್ಟೆಂಬರ್ 5, 2011

ಹಿಂದಿ ಹೇರಿಕೆಗೆ ದಿಕ್ಕಾರ ಎನ್ನೋಣ


ಬಾರತ ಬಾಶಾ ವೈವಿದ್ಯತೆಗಳಿಂದ ಕೂಡಿದ ದೇಶ. ಇಲ್ಲಿ ಎಲ್ಲಾ ಬಾಶೆಗಳಿಗೂ ತನ್ನದೇ ಆದ ವೈಶಿಶ್ಟಗಳಿವೆ. ಆದರೆ ಈ ವೈವಿದ್ಯತೆಯನ್ನ ಅರಿಯದ ಕೆಲವರು ಹಿಂದಿಯನ್ನ ರಾಶ್ಟ್ರಬಾಶೆಯನ್ನಾಗಿಸಲು ಹಲವಾರು ಬಾರಿ ಪ್ರಯತ್ನ ನಡೆಸಿದ್ದರು, ಈ ಸಮಯದಲ್ಲಿ ಹಿಂದಿಯೇತರರಿಂದ ಬಂದ ವಿರೋದದಿಂದ ಅವರ ಪ್ರಯತ್ನ ವಿಪಲವಾಗಿದೆ.

ಹಿಂದಿ ಬಾಶೆಯನ್ನ ಹಿಂದಿಯೇತರರ ಮೇಲೆ ಹೇರುವ ಉದ್ದೇಶದಿಂದ, ಸೆಪ್ಟೆಂಬರ್ ೧೪, ೧೯೪೯ರಂದು ಬಾರತದ ಸಂವಿದಾನದಲ್ಲಿ ಹಿಂದಿ ಬಾಶೆಗೆ ಆಡಳಿತ ಬಾಶೆ ಎನ್ನುವ ಸ್ತಾನ ನೀಡಿಲಾಗಿದ್ದು ,ಅಂದಿನಿಂದ ಇಂದಿನವರೆಗೂ ಆಡಳಿತ ಬಾಶೆಯ ಹೆಸರಿನಲ್ಲಿ ಹಿಂದಿಯೇತರರ ಮೇಲೆ ಹಿಂದಿ ಬಾಶೆಯ ಹೇರಿಕೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ಹಿಂದಿ ಹೇರಿಕೆಯ ಪರಿಣಾಮವಾಗಿ ಸರಕಾರದ ಸವಲತ್ತುಗಳಿಂದ ಹಿಡಿದು ಉದ್ಯೋಗದ ವರೆಗೆ ಹಿಂದಿ ಬಾಶೆಯನ್ನಾಡುವ ಜನರು ಮಾತ್ರ ಉಪಯೋಗ ಪಡೆದುಕೊಂಡು, ಹಿಂದಿಯೇತರರು ವಂಚನೆಗೆ ಗುರಿಯಾಗುತ್ತಿದ್ದಾರೆ ಮತ್ತು ಸರಕಾರ ಹಿಂದಿ ಬಾಶೆಗೆ ಪ್ರಾಮುಕ್ಯತೆ ದೊರೆಕಿಸಿ ಕೊಡಲು ಟೊಂಕ ಕಟ್ಟಿ ನಿಂತಿರುವುದರಿಂದ. ಇತರೇ ಬಾಶೆಗೆ ಮತ್ತು ಆ ಬಾಶೆಯನ್ನಾಡುವ ಜನರಿಗೆ ಅನ್ಯಾಯದ ಸರಮಾಲೆಗಳೇ ಸಿಗುತ್ತಿದೆ.

ಕೇಂದ್ರಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಪ್ರತಿವರ್ಶ ಹಿಂದಿಯನ್ನ ಆಡಳಿತ ಬಾಶೆಯನ್ನಾಗಿ ಮಾಡಿದ ದಿನವನ್ನ(ಸೆಪ್ಟೆಂಬರ್ ೧೪) ಹಿಂದೀ ದಿವಸ್ ಎಂಬ ಹೆಸರಲ್ಲಿ ವೈಭವದ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನವನ್ನ ಹಿಂದಿಯೇತರರಿಗೆ ಆಮಿಶಗಳನ್ನ ಒಡ್ಡಿ ಹಿಂದಿ ಹೇರಿಕೆಗೆ ತಲೆಬಾಗುವಂತೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಇದು ಮಾರಕವಾಗಿದೆ.

ಹಿಂದಿ ಬಾಶೆಯನ್ನ ಹಿಂದಿಯೇತರರ ಮೇಲೆ ಹೇರುತ್ತಿರುವ ಹೀನ ಕ್ರುತ್ಯವನ್ನ ಒಟ್ಟಾಗಿ ಕಂಡಿಸೋಣ. ಬಾರತದ ಬಾಶಾ ವೈವಿದ್ಯತೆಯನ್ನ ಕಾಪಾಡೋಣ. ಸೆಪ್ಟೆಂಬರ್ ೧೪ ರಂದು ನಡೆಸುವ ಹಿಂದಿ ಹೇರಿಕೆ/ಹಿಂದಿ ದಿವಸ್ ಗೆ ದಿಕ್ಕಾರ ಎನ್ನೊಣ!!

ಕೊನೆಯದಾಗಿ: ಹಿಂದಿ ಹೇರಿಕೆಯ ಬಗ್ಗೆ ಬನವಾಸಿ ಬಳಗದ ಆನಂದ್ ರವರು ಬರೆದಿರುವ "ಹಿಂದೀ ಹೇರಿಕೆ - ಮೂರು ಮಂತ್ರ: ನೂರು ತಂತ್ರ" ಎನ್ನುವ ಅಪರೂಪದ ಮಾಹಿತಿಗಳ ಹೊತ್ತಗೆಯೊಂದನ್ನು ಸೆಪ್ಟೆಂಬರ್ ೧೦ ೨೦೧೧ ರ ಶನಿವಾರ ಬೆಳಿಗ್ಗೆ ೧೦:೩೦ ಗಂಟೆಗೆ ಬೆಂಗಳೂರಿನ ನಯನ ಸಬಾಂಗಣದಲ್ಲಿ ಬಿಡುಗಡೆ ಮಾಡಲಾಗುತ್ತದೆ.ಆಸಕ್ತರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿ, ಹಿಂದಿ ಹೇರಿಕೆಯ ಬಗ್ಗೆ ಹೆಚ್ಚಿನ ವಿಶಯಗಳನ್ನ ತಿಳಿಯಬಹುದು.