ಭಾನುವಾರ, ಮೇ 29, 2011

ಇದು ಹಿಂದಿ ಹೇರಿಕೆ ಬೂತದ ಕೈಚಳಕ

ಸರಕಾರ ತನ್ನ ಕಾರ್ಯಗಳು ಜನರಿಗೆ ತಲುಪಿಸೊಕ್ಕೆ ಪತ್ರಿಕೆಗಳನ್ನ ಅವಲಂಬಿಸಿದೆ. ಕೆಲವು ಪ್ರಮುಕ ಕಾರ್ಯಗಳನ್ನ/ ಸೌಲಬ್ಯಗಳನ್ನ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತೆ. ಪತ್ರಿಕೆಗಳಲ್ಲಿ ಜಾಹಿರಾತನ್ನ ನೋಡೊ ಜನ, ಆ ಕಾರ್ಯ/ಸೌಲಬ್ಯದ ಲಾಬ ಪಡೆದುಕೊಳ್ಳಬೇಕು ಅನ್ನೊದು ಉದ್ದೇಶ(?).

ಆದರೆ ಸರಕಾರ ಈ ಜಾಹಿರಾತು ನೀಡೋ ವಿಶಯದಲ್ಲೂ ತಾರತಮ್ಯ ಮಾಡಿ ತನ್ನ ಕಾರ್ಯ/ ಸೌಲಬ್ಯ ಗಳು ಕನ್ನಡಿಗರಿಗೆ ಸಿಗಬಾರ್ದು ಅನ್ನೊ ತರ ನಡೆದುಕೊಳ್ತಿರೋದು ಮಾತ್ರ ನಿಗೂಡ! ಇದೋ ಹೀಗೆ ಅಂತೀರ- ಕನ್ನಡ ಪತ್ರಿಕೆಗಳಲ್ಲಿ ಕನ್ನಡವಲ್ಲದ, ಕನ್ನಡಿಗರಿಗೆ ಅರಿವಿಲ್ಲದ ಹಿಂದಿ ಬಾಶೆಯಲ್ಲಿ ಜಾಹಿರಾತು ನೀಡೋದು.

ಈ ಕೆಲ್ಸವನ್ನ ಸರಕಾರ ಬಹಳ ವ್ಯವಸ್ತಿತವಾಗಿ ಮಾಡ್ತಿದೆ. ಇದರ ಕೆಲವು ಕೆಲವು ಸ್ಯಾಂಪಲ್ ಗಳು-

೧. ಕೆಲವು ವರ್ಶಗಳ ಹಿಂದೆ ನೈರುತ್ಯ ರೈಲ್ವೆ ,ಡಿ ದರ್ಜೆ ನೌಕರರಿಗೆ(೭ ಅತವಾ ೮ ನೇ ತರಗತಿ ಪಾಸಾದವರಿಗೆ) ಅರ್ಜೆಗೆ ಅಹ್ವಾನಿಸಿ, ಕನ್ನಡವಲ್ಲದ ಬಾಶೆಯಲ್ಲಿ ಯಾವುದೋ ಒಂದೆರಡು ಚಿಕ್ಕ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತಂತೆ. ಆ ಜಾಹಿರಾತು ಓದೋಕ್ಕೆ ಆಗದ ಕನ್ನಡದವರು ಅರ್ಜಿ ಹಾಕಿದ್ದೆ ಕಡಿಮೆ ಜನ. ಎಂತಾ ದುರಂತ.



೨. ಸ್ವಲ್ಪ ದಿನಗಳ ಹಿಂದೆ ವಿಕ ನಲ್ಲಿ, ರೈಲ್ವೆಯಲ್ಲಿ ಪ್ರಯಣಿಕರ ಸುರಕ್ಷತೆಯ ಅರಿವಿಗಾಗಿ ನೀಡೋ ಜಾಹಿರಾತು ಹಿಂದಿಯಲ್ಲಿ ಇತ್ತು. ಏನಪ್ಪ ಕನ್ನಡಿಗರ ಸುರಕ್ಷತೆ ಸರಕಾರಕ್ಕೆ ಬೇಡ್ವ?





೩. ಮಿನಿಸ್ಟ್ರಿ ಆಫ್ ಓವರ‍್ಸೀಸ್ ಇಂಡಿಯನ್ ಅಫೇರ್ಸ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹಿಂದಿ ಬಾಶೆಯ ವಾಕ್ಯವನ್ನ ಕನ್ನಡ ಲಿಪಿನಲ್ಲಿ ಬರೆದು ಜಾಹಿರಾತು ಹಾಕಿದೆ. ಇದು ಕಾಟಾಚಾರಕ್ಕೆ ಹಾಕಿರೋದೇ ಅಲ್ವ? ಜಾಹಿರಾತು ಕೊಟ್ಟಂಗು ಇರ್ಬೇಕು, ಕೊಡದೇ ಇರೋ ಹಾಗೂ ಇರಬೇಕು. ನಮ್ ದುಡ್ಡು , ಹಿಂದಿ ಜಾತ್ರೆ.







೪. ಮೊನ್ನೆ ಮತ್ತೆ ರೈಲ್ವೆ , ವಿಕ ನಲ್ಲಿ ಜಾಹಿರಾತು ನೀಡಿದೆ. ದೇವರಾಣೆ ಯಾಕೆ ಅಂತ ನನಗಂತೂ ಗೊತ್ತಾಗ್ಲಿಲ್ಲ.





ಇವು ಬರಿ ಸ್ಯಾಂಪಲ್ ಗಳು ಅಶ್ಟೆ! ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಜಾಹಿರಾತುಗಳ ಸುರಿಮಳೆನೇ ಆಗ್ತಿದೆ.

ಹಿಂದಿ ಗೊತ್ತಿರೋರಿಗೆ ಮಾತ್ರ ಸೌಲಬ್ಯಗಳು ಸಿಕ್ಲಿ

ಈ ಮೇಲಿನವು ಕನ್ನಡಿಗರ ಅತವಾ ಹಿಂದಿಯೇತರರ ಮೇಲೆ ನಡೆಯುತ್ತಿರೋ ಹಿಂದಿ ಹೇರಿಕೆ ಬೂತದ ಕೈಚಳಕ. ಮತ್ತೆ ಮತ್ತೆ ಕನ್ನಡಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹಿರಾತು ನೀಡ್ತಿರೋದನ್ನ ನೋಡಿದ್ರೆ, ಇವು ಏನೋ ಗೊತ್ತಿಲ್ಲದೇ ಆಗಿರೋ ತಪ್ಪ್ಪು ಅಂತ ಅನ್ನಿಸಲ್ಲ, ಈ ಕೆಲ್ಸ ಬಹಳ ವ್ಯವಸ್ತಿತವಾಗಿ ನಡಿತಿದೆ ಅನ್ನೋದಂತು ಡೆಪೆನೆಟ್ ಆಗಿ ಹೇಳ್ಬಹುದು. ಮತ್ತ್ತೆ.. ಈ ಜಾಹಿರಾತುಗಳನ್ನ ನೋಡಿದ್ರೆ, ಹಿಂದಿ ಗೊತ್ತಿರೋರಿಗೆ ಮಾತ್ರ ಸೌಲಬ್ಯಗಳು ಸಿಕ್ಲಿ. ಅನ್ನೊ ಸಂದೇಶ ಎದ್ದು ಕಾಣಿಸ್ತಿದೆ, ಈ ಸಂದೇಶ ನಿಜಕ್ಕೂ ಆತಂಕ ಹುಟ್ಟಿಸ್ತಿದೆ.

ಹಿಂದಿಯೇತರರೂ ಸೌಲಬ್ಯಗಳ ಅನುಕೂಲ ಪಡೆಯೋಕ್ಕೆ ಹಿಂದಿ ಗೊತ್ತಿರುವವರಶ್ಟೇ ಅಹ೯ರು
ಪ್ರಜಾಪ್ರಬುತ್ವದಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರೋ ಸರಕಾರನೇ, ಹಿಂದಿ ಗೊತ್ತಿದ್ರೆ ಮಾತ್ರ ಸೌಲಬ್ಯ ಅನ್ನೊ ಹಾಗಿನ ವ್ಯವಸ್ಥೆ ನಿರ್ಮಾಣ ಮಾಡೊಕ್ಕೆ ಹೊರಟಿರೋದು ಸರಿನಾ? ಪ್ರಜಾಪ್ರಬುತ್ವದಲ್ಲಿ ಕನ್ನಡಿಗರೂ, ಸರಕಾರದ ಕಾರ್ಯ/ ಸೌಲಬ್ಯಗಳ ಅನುಕೂಲ ಪಡೆಯೋಕ್ಕೆ ಹಿಂದಿ ಗೊತ್ತಿರುವವರಶ್ಟೇ ಅಹ೯ರು ಅಲ್ವ?

ಈ ಹಿಂದಿ ಹೇರಿಕೆ ಬೂತದಿಂದ ಮುಕ್ತಿ ಯಾವಗ?

ಸೋಮವಾರ, ಮೇ 2, 2011

ಜಾತ್ರೆ,ಉತ್ಸವ, ಸಮ್ಮೇಳನಗಳ ಆಯೋಜಕರಿಗೆ ಕನ್ನಡದ ಬಗ್ಗೆ ಬದ್ದತೆಯಿದೆಯೇ?


ಸರಕಾರ ಜನರ ಸುಂಕದ ಹಣದಲ್ಲಿ ಕನ್ನಡ ಸಮ್ಮೇಳನಗಳು, ಉತ್ಸವಗಳನ್ನ ನಡೆಸುತ್ತಿದೆ. ಆ ಸಮ್ಮೇಳನಗಳ, ಉತ್ಸವಗಳ ಉದ್ದೇಶ ಸರಿಯಾಗಿಯೇ ಇರಬಹುದು, ಆದ್ರೆ ಆ ಕಾರ್ಯಕ್ರಮಗಳು ನಡೆಯುವಾಗ ನಮ್ಮ ನಾಡಿಗೆ ಸಿಗಬೇಕಾದ ಮನ್ನಣೆ ಮತ್ತು ನಂತರದ ದಿನದಲ್ಲಿ ಕಾರ್ಯಕ್ರಮಗಳಿಂದ ಆಗಬೇಕಾದ ಬದಲಾವಣೆಗಳು ಆಗದಿರುವುದರಿಂದ ನಿಜವಾಗಿಯೂ ಈ ಸಭೆ ಸಮ್ಮೇಳನ, ಉತ್ಸವಗಳಿಗೆ ಕೋಟಿ ಕೋಟಿ ಹಣ ಸುರಿಯುವ ಅವಶ್ಯಕತೆ ಇದಯೇ



ಕೋಟಿ ಕೋಟಿ ಸುರಿದು ನಡೆಸುವ ಸಭೆ ಸಮಾರಂಬಗಳಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಏಳಿಗೆ ಬಗ್ಗೆ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ನಾಡಿನ ಏಳಿಗೆಗೆ/ ನಾಡಿನ ಸಮಸ್ಯೆಯ ಪರಿಹಾರಕ್ಕೆ ಬೇಕಾದ ನಿರ್ಣಯಗಳನ್ನು ತೆಗೆದುಕೊಂಡು, ಆ ನಿರ್ಣಯಗಳ ಜಾರಿಗೊಳಿಸಿದಾಗಲೇ ಆ ಸಮ್ಮೇಳನಗಳು ಯಶಸ್ವಿಯಾದಂತೆ. ಸಮ್ಮೇಳನಗಳ ವೇದಿಕೆಯಲ್ಲಿ ಕನ್ನಡ.. ಕನ್ನಡ ಅನ್ನೊ ಸರಕಾರ, ಕಾರ್ಯಕ್ರಮ ಮುಗಿದ ನಂತರ ಕನ್ನಡವನ್ನೇ ಮರೆಯುತ್ತಿರುವುದು ಸರಿಯೇ? ನಿರ್ಣಯಗಳನ್ನು ತೆಗೆದುಕೊಡು, ನಿರ್ಣಯವನ್ನ ಜಾರಿಗೊಳಿಸದೇ, ಜನ ಸೇರಿದ್ದೇ ಯಶಸ್ವಿಯೆನ್ನುವುದು ಎಶ್ಟು ಸರಿ?

ಇದೀಗ ನಮ್ಮ ಮುಕ್ಯ ಮಂತ್ರಿಗಳ ಪೋಟೋ ಜೊತೆಗೆ, ಕಳೆದ ತಿಂಗ್ಳು ನಡೆದ ವಿಶ್ವ ಕನ್ನಡಿಗರ ಸಮ್ಮೇಳನ ಯಶಸ್ವಿ ಅಂತ ಎಲ್ಲಾ ಕಡೆ ಜಾಹಿರಾತು ನೀಡ್ತಿದ್ದಾರೆ. ನಿಜವಾಗಿಯೂ ವಿಶ್ವ ಕನ್ನಡಿಗರ ಸಮಾವೇಶ ಯಶಸ್ವಿ ಯಾಗಿದಿಯೇ?ಸಮ್ಮೇಳನ ನಡೆದ ಕೆಲವೇ ದಿನದಲ್ಲಿ ನಾಡ ವಿರೋದಿಗಳು ಬೆಳಗಾವಿ ನಗರ ಪಾಲಿಕೆಯಲ್ಲೇ ಮೇಲುಗೈ ಸಾದಿಸಲು ಸಹಾಯ ಮಾಡಿದವರು ಸಮ್ಮೇಳನ ಯಶಸ್ವಿ ಅನ್ನೋದು ಸರಿಯೇ? ೨೦ ಲಕ್ಷ ಜನ ಬಂದಿದಾರೆ ಅಂದ್ರೆ ಅದು ಯಶಸ್ವಿಯೇ? ಗಡಿನಾಡಿನಲ್ಲಿ ನಡೆದ ಸಮ್ಮೇಳನದಿಂದ ಬೆಳಗಾವಿಯಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಬೇಕು, ವಿಬಜನೆಯ ಕೂಗು ನಿಲ್ಲಬೇಕು ಎನ್ನೋ ಆಶಯ ಏನಾಯಿತು?

ಇದರ ಜೊತೆಗೆ ಸರಕಾರ ಗಡಿ ನಾಡಿನ ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ. ಇಲ್ಲಿ ಆಯಾ ಜಿಲ್ಲೆಯ ಕಲಾವಿದರಿಗೆ ಅವಕಾಶ ಸಿಗಬೇಕು ಅಲ್ವ? ಜೊತೆಗೆ ಆಯಾ ಜಿಲ್ಲೆಯ ಕಲೆ ಸಂಸ್ಕೃತಿ ಗೆ ಮನ್ನಣೆ ಸಿಗ್ಬೇಕು ಅಲ್ವ?ಈ ಉತ್ಸವಗಳ ಮೂಲಕ ಸರಕಾರ ಗಡಿ ಪ್ರದೇಶದಲ್ಲಿ ಕನ್ನಡದ ವಾತಾವರಣ ನಿರ್ಮಿಸಲು ಉಪಯೋಗಿಸಿಕೊಳ್ಳಬಹುದಿತ್ತು. ಆದ್ರೆ ಇಲ್ಲಿ ನಡಿತಿರೋದೇ ಬೇರೆ, ಬೀದರ್, ಗುಲ್ಬರ್ಗ ಉತ್ಸವದಲ್ಲಿ ಕಾಟಾಚಾರಕ್ಕೆ ಕನ್ನಡ ಕಾರ್ಯಕ್ರಮ ನಡೆಸಿ, ಹೆಚ್ಚು ಹೆಚ್ಚು ಹಿಂದಿ ಕಾರ್ಯಕ್ರಮ ನ ಆಯೋಜಿಸ್ತಿರೋದು ನೋಡಿದ್ರೆ ಸರಕಾರನೇ ಈ ಉತ್ಸವಗಳ ಮೂಲಕ ಹಿಂದಿ ಬಾಶೆಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರುವುದು ಒಂದು ದುರಂತ.

ಇನ್ನು ನಾಡ ಹಬ್ಬ ಮೈಸೂರು ದಸರ, ಹಂಪಿ ಉತ್ಸವಕ್ಕೆ ಬಂದರೆ, ನಮ್ಮ ನಾಡ ಹಬ್ಬದಲ್ಲಿ ನಮ್ಮ ನಾಡಿನ ವಿಶಯಗಳಿಗೆ ಮನ್ನಣೆ ದೊರೆಯಬೇಕಾದುದ್ದು ನ್ಯಾಯಯುತವಾದುದು, ಇಲ್ಲೇನಾಗ್ತಿದೆ? ಯುವ ದಸರ ಹೆಸರಲ್ಲಿ ಹಿಂದಿ ಕಾರ್ಯಕ್ರಮ ನಡ್ತೆಸಿದ್ದಾರೆ, ಹಂಪಿ ಉತ್ಸವಕ್ಕೆ ಲಕ್ಷಾಂತರ ರೂಪಾಯಿ ಕೊಟ್ಟು ನಮ್ಮ ನಾಡಿಗೆ ಸಂಬಂದವಿಲ್ಲದ ಪರಬಾಶೆಯ ಕಲಾವಿದರಿಂದ ಪರಬಾಶೆಯ ಕಾರ್ಯಕ್ರಮ ನಡೆಸ್ತಿದ್ದಾರೆ.

ಇದನ್ನೆಲ್ಲಾ ನೋಡಿದ್ರೆ ನಿಜವಾಗಿಯೂ ಸಮ್ಮೇಳನ, ಉತ್ಸವ, ಜಾತ್ರೆ, ಹಬ್ಬಗಳನ್ನ ನಡೆಸೋ ಸರಕಾರ ಮತ್ತು ಕಾರ್ಯಕ್ರಮಗಳ ಆಯೋಜಕರಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ನಿಜವಾಗಿಯೂ ಬದ್ದತೆಯಿದೆಯೇ ಎನ್ನೊ ಪ್ರಶ್ನೆ ಹುಟ್ಟುತ್ತೆ.