ಸೋಮವಾರ, ಮೇ 2, 2011

ಜಾತ್ರೆ,ಉತ್ಸವ, ಸಮ್ಮೇಳನಗಳ ಆಯೋಜಕರಿಗೆ ಕನ್ನಡದ ಬಗ್ಗೆ ಬದ್ದತೆಯಿದೆಯೇ?


ಸರಕಾರ ಜನರ ಸುಂಕದ ಹಣದಲ್ಲಿ ಕನ್ನಡ ಸಮ್ಮೇಳನಗಳು, ಉತ್ಸವಗಳನ್ನ ನಡೆಸುತ್ತಿದೆ. ಆ ಸಮ್ಮೇಳನಗಳ, ಉತ್ಸವಗಳ ಉದ್ದೇಶ ಸರಿಯಾಗಿಯೇ ಇರಬಹುದು, ಆದ್ರೆ ಆ ಕಾರ್ಯಕ್ರಮಗಳು ನಡೆಯುವಾಗ ನಮ್ಮ ನಾಡಿಗೆ ಸಿಗಬೇಕಾದ ಮನ್ನಣೆ ಮತ್ತು ನಂತರದ ದಿನದಲ್ಲಿ ಕಾರ್ಯಕ್ರಮಗಳಿಂದ ಆಗಬೇಕಾದ ಬದಲಾವಣೆಗಳು ಆಗದಿರುವುದರಿಂದ ನಿಜವಾಗಿಯೂ ಈ ಸಭೆ ಸಮ್ಮೇಳನ, ಉತ್ಸವಗಳಿಗೆ ಕೋಟಿ ಕೋಟಿ ಹಣ ಸುರಿಯುವ ಅವಶ್ಯಕತೆ ಇದಯೇ



ಕೋಟಿ ಕೋಟಿ ಸುರಿದು ನಡೆಸುವ ಸಭೆ ಸಮಾರಂಬಗಳಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಏಳಿಗೆ ಬಗ್ಗೆ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ನಾಡಿನ ಏಳಿಗೆಗೆ/ ನಾಡಿನ ಸಮಸ್ಯೆಯ ಪರಿಹಾರಕ್ಕೆ ಬೇಕಾದ ನಿರ್ಣಯಗಳನ್ನು ತೆಗೆದುಕೊಂಡು, ಆ ನಿರ್ಣಯಗಳ ಜಾರಿಗೊಳಿಸಿದಾಗಲೇ ಆ ಸಮ್ಮೇಳನಗಳು ಯಶಸ್ವಿಯಾದಂತೆ. ಸಮ್ಮೇಳನಗಳ ವೇದಿಕೆಯಲ್ಲಿ ಕನ್ನಡ.. ಕನ್ನಡ ಅನ್ನೊ ಸರಕಾರ, ಕಾರ್ಯಕ್ರಮ ಮುಗಿದ ನಂತರ ಕನ್ನಡವನ್ನೇ ಮರೆಯುತ್ತಿರುವುದು ಸರಿಯೇ? ನಿರ್ಣಯಗಳನ್ನು ತೆಗೆದುಕೊಡು, ನಿರ್ಣಯವನ್ನ ಜಾರಿಗೊಳಿಸದೇ, ಜನ ಸೇರಿದ್ದೇ ಯಶಸ್ವಿಯೆನ್ನುವುದು ಎಶ್ಟು ಸರಿ?

ಇದೀಗ ನಮ್ಮ ಮುಕ್ಯ ಮಂತ್ರಿಗಳ ಪೋಟೋ ಜೊತೆಗೆ, ಕಳೆದ ತಿಂಗ್ಳು ನಡೆದ ವಿಶ್ವ ಕನ್ನಡಿಗರ ಸಮ್ಮೇಳನ ಯಶಸ್ವಿ ಅಂತ ಎಲ್ಲಾ ಕಡೆ ಜಾಹಿರಾತು ನೀಡ್ತಿದ್ದಾರೆ. ನಿಜವಾಗಿಯೂ ವಿಶ್ವ ಕನ್ನಡಿಗರ ಸಮಾವೇಶ ಯಶಸ್ವಿ ಯಾಗಿದಿಯೇ?ಸಮ್ಮೇಳನ ನಡೆದ ಕೆಲವೇ ದಿನದಲ್ಲಿ ನಾಡ ವಿರೋದಿಗಳು ಬೆಳಗಾವಿ ನಗರ ಪಾಲಿಕೆಯಲ್ಲೇ ಮೇಲುಗೈ ಸಾದಿಸಲು ಸಹಾಯ ಮಾಡಿದವರು ಸಮ್ಮೇಳನ ಯಶಸ್ವಿ ಅನ್ನೋದು ಸರಿಯೇ? ೨೦ ಲಕ್ಷ ಜನ ಬಂದಿದಾರೆ ಅಂದ್ರೆ ಅದು ಯಶಸ್ವಿಯೇ? ಗಡಿನಾಡಿನಲ್ಲಿ ನಡೆದ ಸಮ್ಮೇಳನದಿಂದ ಬೆಳಗಾವಿಯಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಬೇಕು, ವಿಬಜನೆಯ ಕೂಗು ನಿಲ್ಲಬೇಕು ಎನ್ನೋ ಆಶಯ ಏನಾಯಿತು?

ಇದರ ಜೊತೆಗೆ ಸರಕಾರ ಗಡಿ ನಾಡಿನ ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ. ಇಲ್ಲಿ ಆಯಾ ಜಿಲ್ಲೆಯ ಕಲಾವಿದರಿಗೆ ಅವಕಾಶ ಸಿಗಬೇಕು ಅಲ್ವ? ಜೊತೆಗೆ ಆಯಾ ಜಿಲ್ಲೆಯ ಕಲೆ ಸಂಸ್ಕೃತಿ ಗೆ ಮನ್ನಣೆ ಸಿಗ್ಬೇಕು ಅಲ್ವ?ಈ ಉತ್ಸವಗಳ ಮೂಲಕ ಸರಕಾರ ಗಡಿ ಪ್ರದೇಶದಲ್ಲಿ ಕನ್ನಡದ ವಾತಾವರಣ ನಿರ್ಮಿಸಲು ಉಪಯೋಗಿಸಿಕೊಳ್ಳಬಹುದಿತ್ತು. ಆದ್ರೆ ಇಲ್ಲಿ ನಡಿತಿರೋದೇ ಬೇರೆ, ಬೀದರ್, ಗುಲ್ಬರ್ಗ ಉತ್ಸವದಲ್ಲಿ ಕಾಟಾಚಾರಕ್ಕೆ ಕನ್ನಡ ಕಾರ್ಯಕ್ರಮ ನಡೆಸಿ, ಹೆಚ್ಚು ಹೆಚ್ಚು ಹಿಂದಿ ಕಾರ್ಯಕ್ರಮ ನ ಆಯೋಜಿಸ್ತಿರೋದು ನೋಡಿದ್ರೆ ಸರಕಾರನೇ ಈ ಉತ್ಸವಗಳ ಮೂಲಕ ಹಿಂದಿ ಬಾಶೆಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರುವುದು ಒಂದು ದುರಂತ.

ಇನ್ನು ನಾಡ ಹಬ್ಬ ಮೈಸೂರು ದಸರ, ಹಂಪಿ ಉತ್ಸವಕ್ಕೆ ಬಂದರೆ, ನಮ್ಮ ನಾಡ ಹಬ್ಬದಲ್ಲಿ ನಮ್ಮ ನಾಡಿನ ವಿಶಯಗಳಿಗೆ ಮನ್ನಣೆ ದೊರೆಯಬೇಕಾದುದ್ದು ನ್ಯಾಯಯುತವಾದುದು, ಇಲ್ಲೇನಾಗ್ತಿದೆ? ಯುವ ದಸರ ಹೆಸರಲ್ಲಿ ಹಿಂದಿ ಕಾರ್ಯಕ್ರಮ ನಡ್ತೆಸಿದ್ದಾರೆ, ಹಂಪಿ ಉತ್ಸವಕ್ಕೆ ಲಕ್ಷಾಂತರ ರೂಪಾಯಿ ಕೊಟ್ಟು ನಮ್ಮ ನಾಡಿಗೆ ಸಂಬಂದವಿಲ್ಲದ ಪರಬಾಶೆಯ ಕಲಾವಿದರಿಂದ ಪರಬಾಶೆಯ ಕಾರ್ಯಕ್ರಮ ನಡೆಸ್ತಿದ್ದಾರೆ.

ಇದನ್ನೆಲ್ಲಾ ನೋಡಿದ್ರೆ ನಿಜವಾಗಿಯೂ ಸಮ್ಮೇಳನ, ಉತ್ಸವ, ಜಾತ್ರೆ, ಹಬ್ಬಗಳನ್ನ ನಡೆಸೋ ಸರಕಾರ ಮತ್ತು ಕಾರ್ಯಕ್ರಮಗಳ ಆಯೋಜಕರಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ನಿಜವಾಗಿಯೂ ಬದ್ದತೆಯಿದೆಯೇ ಎನ್ನೊ ಪ್ರಶ್ನೆ ಹುಟ್ಟುತ್ತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ