ಕನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಫೆಬ್ರವರಿ 24, 2013

ಸರಕಾರಿ ವೆಬ್ ಸೈಟ್ ನಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ

ಕನ್ನಡ ಗ್ರಾಹಕ ಕೂಟದ ಗೆಳೆಯರು ಹಲವಾರು ದಿನಗಳಿಂದ ಸರಕಾರದ ವೆಬ್ ಸೈಟ್ ಗಳಲ್ಲಿ ಕನ್ನಡದ ಬಳಕೆ ಸರಿಯಾಗಿ ಆಗಿಲ್ಲವೆಂದು ಅನೇಕ ರೀತಿಯಲ್ಲಿ ದನಿಯೆತ್ತುತ್ತಿದ್ದೇವೆ. ಈ ವಿಶಯವನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಅಭಿವೃದ್ದ್ದಿ ಪ್ರಾಧಿಕಾರದವರು ನಮ್ಮ ಕೂಟದ ಗೆಳೆಯರು ಈ ವಿಶಯವಾಗಿ ನೀಡುವ ದೂರಿನ ಅನ್ವಯ ಅನೇಕ ಇಲಾಖೆಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಅಭಿವೃದ್ದಿ ಪ್ರಾಧಿಕಾರದ ಸಹಾಯದೊಂದಿದೆ ಈ ವಿಶಯವನ್ನು ಮುಖ್ಯಮಂತ್ರಿಗಳೂ ಸೇರಿದಂತೆ ಸರಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತರಲು ಯಶಸ್ವಿಯಾಗಿದ್ದೇವೆ.

ಇದೇ ನಿಟ್ಟಿನಲ್ಲಿ ಶನಿವಾರ 23-2-2013 ರಂದು, ವಿಕಾಸ ಸೌಧದಲ್ಲಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದವರು  ಸರಕಾರಿ ವೆಬ್ ಸೈಟ್ ಗಳಲ್ಲಿ ಕನ್ನಡಕ್ಕೆ ಮೊದಲ ಪ್ರಾಮುಖ್ಯತೆ ಸಿಗಬೇಕೆಂದು ಸಭೆಯೊಂದನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಸರಕಾರದ ಇ-ಆಡಳಿತದ ಉನ್ನತ ಅಧಿಕಾರಿಗಳು ಮತ್ತು ಸರಕಾರಕ್ಕೆ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸುವ NIC ಸಂಸ್ಥೆಯವರು ಭಾಗವಹಿಸಿದ್ದರು. ಕನ್ನಡ ಗ್ರಾಹಕ ಕೂಟದ ಗೆಳೆಯರು ಹಲವಾರು ಬಾರಿ ಸರಕಾರಿ ವೆಬ್ ಸೈಟ್ ಗಳ ಬಗ್ಗೆ ದೂರು ನೀಡುತ್ತಿರುವುದರಿಂದ ನನ್ನನ್ನು ಸಹ ಆಹ್ವಾನಿಸಿದ್ದರು. ಸಭೆಗೆ ಬಂದಿದ್ದ NIC ಮತ್ತು ಇ-ಆಡಳಿತದ ಅಧಿಕಾರಿಗಳು ಮತ್ತು NIC ಸಂಸ್ಥೆಯವರು ಅತೀ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುವ ಬರವಸೆಯನ್ನು ನೀಡಿದ್ದಾರೆ.

ಸರಕಾರದ ವೆಬ್ ಸೈಟ್ ಗಳಲ್ಲಿ ಕನ್ನಡದ ಸ್ಥಿತಿಯ ಬಗ್ಗೆ ನೀಡಿದ್ದ ವರದಿ ಹೀಗಿದೆ-


ಮಂಗಳವಾರ, ಜನವರಿ 8, 2013

ಕರ್ನಾಟಕದಲ್ಲಿ ಕನ್ನಡ ಹಾಡನ್ನು ಹಾಕಲು ಕೀಳರಿಮೆಯೇಕೆ?

ಕಾಪಿ ಡೇ ನಲ್ಲಿ ಕನ್ನಡದ ಹಾಡುಗಳನ್ನು ಹಾಕದಿರುವುದರ ಬಗ್ಗೆ ಕಾಪಿ ಡೇ ಗೆ ಹೋಗಿದ್ದ ಗೆಳೆಯರೊಬ್ಬರು ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಪಿ ಡೇ ತಾವು ದೇಶದ ಎಲ್ಲಾ ಅಂಗಡಿಗಳಲ್ಲೂ ಒಂದೇ ತರನಾದ ವಾತಾವಣವನ್ನು ಹೊಂದಲು, ಹಿಂದಿ/ ಇಂಗ್ಲೀಶ್ ಗೀತೆಗಳನ್ನು ಮಾತ್ರ ಹಾಕುತ್ತೇವೆಂದು ತಿಳಿಸಿದ್ದಾರೆ. 


ಕಾಪಿ ಡೇ ಗೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಂಗಡಿಯನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಹಿಂದಿ/ಇಂಗ್ಲೀಶ್ ಹಾಡುಗಳನ್ನು ಮಾತ್ರ ಹಾಕುತ್ತೇವೆ ಎನ್ನುವ ಮೂಲಕ ಕಂಪನಿಯು ತನ್ನ ಗ್ರಾಹಕರು, ಬೇಕಿದ್ದರೆ ಬರಲಿ ಇಲ್ಲವೇ ಬಿಡಲಿ ಎನ್ನುವಂತೆ ಆಡುತ್ತಿರುವುದು ಎಶ್ಟರ ಮಟ್ಟಿಗೆ ಸರಿ?

ಹೊರದೇಶದ ಅನೇಕ ಕಾಪಿ ಡೇ ತರನಾದ ಅಂಗಡಿಗಳು ಬಾರತದ ವೈವಿದ್ಯತೆಯನ್ನು ಗೌರವಿಸುವುದನ್ನು ನೋಡಿದ್ದೇನೆ ಆದರೆ ಕಾಪಿ ಡೇಯ ಈ ಉತ್ತರವನ್ನು ಗಮನಿಸಿದ್ರೆ, ಕಾಪಿ ಡೇ ತನ್ನ ಗ್ರಾಹಕರನ್ನು ಸರಿಯಾಗಿ ಅರ್ತ ಮಾಡಿಕೊಳ್ಳಲು ಎಡವುತ್ತಿರುವುದು ಕಾಣಿಸುತ್ತದೆ. ಬಾರತದಂತ ವೈವಿದ್ಯಮಯ ದೇಶದಲ್ಲಿ ದೇಶಕ್ಕೆಲ್ಲಾ ಒಪ್ಪುವಂತೆ ಒಂದೇ ನಿಯಮ ಮಾಡ್ತಿವಿ ಅನ್ನೋದು  ವೈವಿದ್ಯತೆಯಿಂದ ಕೂಡಿರುವ ಗ್ರಾಹಕರು ತಮಗೆ ಬೇಡ ಎನ್ನುವಂತಿದೆ. ಕಾಪಿ ಡೇ ನಂತೆಯೇ ಹೊರದೇಶಗಳ ಅಂಗಡಿಗಳು ಇದೇ ರೀತಿ ವೈವಿದ್ಯತೆಯನ್ನು ಬದಿಗೊಡ್ಡಿ ನಿಯಮ ಮಾಡಿದಲ್ಲಿ ಮುಂದೆ ಆಗುವ ಅನಾಹುತವನ್ನು ಊಹಿಸಿಕೊಳ್ಳಲೂ ಅಸಾದ್ಯ. 

ಈ ರೀತಿಯ ಗ್ರಾಹಕ ವಿರೋದಿ ನಿಯಮವನ್ನು ಮಾಡಿಕೊಳ್ಳಲು, ಇಂದಿಗೂ ಅನೇಕ ಕನ್ನಡದ  ಗ್ರಾಹಕರು ತಮ್ಮ ಬಾಶೆಯಲ್ಲಿ ಸೇವೆ ಕೇಳುವುದು ತಪ್ಪು ಎನ್ನುವಂತಹ ಮನಸ್ತಿತಿ ಹೊಂದಿರುವುದು ಕಾರಣವಾಗಿದೆ. ಕನ್ನಡಿಗರು ತಮ್ಮ ಬಾಶೆಯ ಬಗೆಗಿನ ಕೀಳರಿಮೆಯನ್ನು ತೊಡೆದು ಇಂತಹಾ ನಿಯಮಗಳನ್ನು ಪ್ರಶ್ನಿಸಿದಲ್ಲಿ,  ನಿಯಮ ಬದಲಾಗಿ ಎಲ್ಲೆಡೆ ಕನ್ನಡದ ವಾತಾವರಣವನ್ನು ನಿರ್ಮಿಸಲು ಸಾದ್ಯವಾದೀತು. 

ತಾವು ಕಾಪಿ ಡೇ ಗೆ ಹೋದ ಸಮಯದಲ್ಲಿ ಅಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗುವಂತೆ ಸಲಹೆಯನ್ನು ನೀಡಿ ಬನ್ನಿ. ಜೊತೆಗೆ ಕೆಳಗಿನ ಕೊಂಡಿಯಲ್ಲೂ ಸಹ ಈ ವಿಶಯದ ಬಗ್ಗೆ ಪ್ರಸ್ತಾಪಿಸಬಹುದು- 


ಬುಧವಾರ, ಆಗಸ್ಟ್ 22, 2012

ಬೆಂಗಳೂರು ಟ್ರಾಪಿಕ್ ಮೇಲೆ ಬೀಸುತ್ತಿರುವ ಕನ್ನಡದ ತಂಗಾಳಿ

ಕೆಲವು ದಿನಗಳ ಹಿಂದೆ ಬೆಂಗಳೂರು ಟ್ರಾಪಿಕ್ ಪೋಲೀಸ್ ಇಲಾಕೆಯಲ್ಲಿ ಆಗುತ್ತಿರುವ ಕನ್ನಡದ ಕಡೆಗಣನೆಯ ಬಗ್ಗೆ ನನ್ನ ಬ್ಲಾಗಿನಲ್ಲಿ ಬರೆದಿದ್ದೆನು. ಅವುಗಳಲ್ಲಿ  ಮುಕ್ಯವಾಗಿ-


  • ನಿಲ್ದಾಣವಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ಅಂಟಿಸುತ್ತಿದ್ದ ಚೀಟಿಯಲ್ಲಿ ಕನ್ನಡವಿಲ್ಲದಿರುವುದು
  • ಸಾರ್ವಜನಿಕ ಜಾಗದಲ್ಲಿ ಜನರಲ್ಲಿ ಜಾಗ್ರುತಿ ಮೂಡಿಸಲೆಂದು ಮಾಡಿದ್ದ ವಿಡಿಯೋನಿಂದ ಕನ್ನಡವನ್ನು ಕೈಬಿಟ್ಟಿದ್ದು
  •  ಆಟೋ ಚಾಲಕರ ಮಾಹಿತಿಯುಳ್ಳ ಚೀಟಿಯಲ್ಲಿ ಕನ್ನಡವನ್ನು ಕೈಬಿಟ್ಟಿದ್ದು
  • ಪೇಸ್ ಬುಕ್ಕಿನ ಕಾತೆಯಲ್ಲಿ ಇಂಗ್ಲೀಶ್ ನಲ್ಲಿ ಮಾತ್ರ ಮಾಹಿತಿ ಹಾಕುತ್ತಿದ್ದುದ್ದು
  • ದಂಡ ಕಟ್ಟಿದ್ದಕ್ಕೆ ಕೊಡುವ ಬ್ಲಾಕ್ ಬೆರಿ ರಶೀತಿಯಲ್ಲಿ ಕನ್ನಡ ಇಲ್ಲದಿರುವುದು
ಹೀಗೆ ಹಲವಾರು ಕಡೆಗಳಲ್ಲಿ ಟ್ರಾಪಿಕ್ ಪೋಲೀಸ್ ಇಲಾಕೆಯು ಕನ್ನಡವನ್ನು ಕಡೆಗಣಿಸಿತ್ತು. ಕನ್ನಡದ ಕಡೆಗಣನೆಯ ಬಗ್ಗೆ ಹಲವಾರು ಜಾಗ್ರುತ ಕನ್ನಡಿಗರು ದನಿ ಎತ್ತಿದ್ದರು. ಜಾಗ್ರುತ ಕನ್ನಡಿಗರ ಒತ್ತಾಯದ ಮೇರೆಗೆ ಇದೀಗ ಇಲಾಕೆಯು  ಒಂದೊಂದಾಗಿ ಕನ್ನಡವಿಲ್ಲದ ಕಡೆಗಳೆಲ್ಲಾ ಕನ್ನಡವನ್ನು ಬಳಕೆ ಮಾಡಲು ಪ್ರಾರಂಬಿಸಿದೆ, ಇದು ನಿಜಕ್ಕೂ ಸಂತೋಶದ ಸುದ್ದಿ. 

ಈಗ ನಿಲ್ದಾಣವಿಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ಅಂಟಿಸುತ್ತಿದ್ದ ಚೀಟಿಯಲ್ಲಿ ಕನ್ನಡದಲ್ಲಿ ಮಾಹಿತಿ ನೀಡಲಾಗಿದೆ. ಟ್ರಾಪಿಕ್ ಜಾಗ್ರುತಿ ವಿಡಿಯೋ ನಲ್ಲಿ ಕನ್ನಡವನ್ನು ಬಳಸಲಾಗಿದೆ. ಆಟೋ ಚಾಲಕರ ವಿವರವುಳ್ಳ ಚೀಟಿಯಲ್ಲಿ ಕನ್ನಡದಲ್ಲಿ ಮಾಹಿತಿ ಹಾಕಲಾಗಿದೆ. ಪೇಸ್ ಬುಕ್ಕಿನಲ್ಲಿ ಕನ್ನಡದಲ್ಲಿ ಮಾಹಿತಿ ಹಾಕಲಾಗುತ್ತಿದೆ ಜೊತೆಗೆ ದಂಡ ಕಟ್ಟಿದ್ದಕ್ಕೆ ಕೊಡುವ ರಶೀತಿಯಲ್ಲಿ ಕನ್ನಡದಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಬ್ಲಾಕ್ ಬೆರಿ ರಶೀತಿಯಲ್ಲಿ ಕನ್ನಡ ಕಾಣುವುದೆಂಬ ಆಶ್ವಾಸನೆಯನ್ನು ನೀಡಿದ್ದಾರೆ. 

ಪೋಲೀಸ್ ಇಲಾಕೆಯನ್ನು ಜನರ ಬಳಿಗೆ ಕೊಂಡೊಯ್ಯಲು ಆಡಳಿತದಲ್ಲಿ ಕನ್ನಡದ ಬಳಕೆ ಅತ್ಯವಶ್ಯಕ. ಇದನ್ನು ಮನಗಂಡು  ಕನ್ನಡದ ಬಳಕೆಗೆ ಮುಂದಾಗಿರುವ ಟ್ರಾಪಿಕ್ ಪೋಲೀಸ್  ಕಮಿಶನರ್ ಸಲೀಂ ರವರಿಗೆ ಮತ್ತು ಇಲಾಕೆಯ ಇನ್ನಿತರ ಅದಿಕಾರಿಗಳಿಗೆ ಅಬಿನಂದನೆಗಳು. ಟ್ರಾಪಿಕ್ ಇಲಾಕೆಯ ಈ ನಡೆ ಕನ್ನಡವನ್ನು ಕಡೆಗಣಿಸುತ್ತಿರುವ ಇನ್ನಿತರ ಇಲಾಕೆಗಳಿಗೆ ಮಾದರಿಯಾಗಲಿ.

ಭಾನುವಾರ, ನವೆಂಬರ್ 20, 2011

ಕನ್ನಡ ನಾಡಿನಲ್ಲಿ ಪಡಿತರ ಚೀಟಿ ಪಡೆಯಲು ಇಂಗ್ಲೀಶ್ ಗೊತ್ತಿರಬೇಕೆ?

ಆಡಳಿತದಲ್ಲಿ ತಂತ್ರಜ್ನಾನವನ್ನ ಹೆಚ್ಚು ಹೆಚ್ಚು ಬಳಸಿದಶ್ಟೂ ಆಡಳಿತದಲ್ಲಿ ಪಾರದರ್ಶಕತೆಯನ್ನ ತರಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸರಕಾರದ ಅನೇಕ ಇಲಾಕೆಗಳು ತಂತ್ರಜ್ನಾನವನ್ನ ಬಳಸುತ್ತಿವೆಯಾದರೂ, ತಂತ್ರಜ್ನಾನದಲ್ಲಿ ಕನ್ನಡದ ಬಳಕೆಯನ್ನ ಮಾಡದೇ, ಆಡಳಿತವನ್ನ ಜನರಿಂದ ದೂರವಾಗುವಂತೆ ಮಾಡುತ್ತಿರುವುದು ಮಾತ್ರ ಸರಿಯಲ್ಲದ್ದು.




ಇದೇ ನಿಟ್ಟಿನಲ್ಲಿ ಕಳೆದ ವಾರ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಕೆಯವರು ಪಡಿತರ ಚೀಟಿಗಳನ್ನ ಹೊಂದಿರದ ಅಹ೯ರಿಗೆ ಪಡಿತರ ಚೀಟಿಯನ್ನ ಆದಶ್ಟು ಬೇಗನೆ ಸಿಗುವಂತೆ ಮಾಡಲು ಒಂದು ವಿಂಬಲೆಯನ್ನ (http://ahara.kar.nic.in/)ನಿರ್ಮಿಸಿದ್ದಾರೆ. ಜೊತೆಗೆ ಅರ್ಜಿಗಳನ್ನ ಈ ವೆಬ್ ಸೈಟ್ ಮೂಲಕವೇ ಸಲ್ಲಿಸಬೇಕು ಎಂಬ ಮಾಹಿತಿಯುಳ್ಳ ಜಾಹಿರಾತನ್ನ ಹಲವಾರು ಪತ್ರಿಕೆಗಳಲ್ಲಿ ನೀಡಿಲಾಗಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬೇಕಾದಲ್ಲಿ ಈ ಮಿಂಬಲೆಯ ಬಳಕೆ ಅನಿವಾರ್ಯ!!!! ಆದರೆ.... ಈ ಮಿಂಬಲೆಯಲ್ಲೂ ಸಹ ಕನ್ನಡವನ್ನ ಬಳಕೆ ಮಾಡದೇ, ಆಡಳಿತ ಯಂತ್ರವನ್ನ ಸಾಮಾನ್ಯ ಜನರಿಂದ ದೂರವಾಗುವಂತೆ ಮಾಡಿದೆ. ಈ ಮಿಂಬಲೆಯ ಮೂಲಕ ಸರಕಾರ, ಸಾಮಾನ್ಯ ಜನರು ತಮ್ಮ ಪಡಿತರ ಚೀಟಿಯನ್ನ ಸುಲಬವಾಗಿ ಮತ್ತು ಆದಶ್ಟು ಬೇಗನೆ ಪಡೆಯಲು ಇಂಗ್ಲೀಶ್ ಕಲಿಯಬೇಕಾದ ಅನಿವಾರ್ಯತೆಯನ್ನ ನಿರ್ಮಿಸಲು ಹೊರಟಿದೆ.





ಇಂದು ತಂತ್ರಜ್ನಾನ ಮುಂದುವರೆದಿದ್ದು, ಕನ್ನಡವನ್ನ ಇಂಗ್ಲೀಶ್ ನಶ್ಟೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾದ್ಯವಾಗುವಶ್ಟು ಬೆಳೆದಿದೆ ಮತ್ತು ಬೆಳೆಯುತ್ತಿದೆ. ತಂತ್ರಜ್ನಾನದ ಬಳಕೆಯಶ್ಟೇ, ಆ ತಂತ್ರಜ್ನಾನದಲ್ಲಿ ಬಳಕೆಯಾಗಿರುವ ಬಾಶೆಯೂ ಮುಕ್ಯ. ಜನರ ಬಾಶೆಯಲ್ಲಿ ತಂತ್ರಜ್ನಾನವಿದ್ದಲ್ಲಿ ಮಾತ್ರ ಜನರನ್ನ ತಲುಪಲು ಸಾದ್ಯ. ಇದರಿಂದಲೇ ಇಂದು ಗೂಗಲ್, ಪೇಸ್ ಬುಕ್, ಯಾಹೂ ಸೇರಿದಂತೆ ಅನೇಕ ಕಂಪನಿಗಳೂ ಕನ್ನಡ ಬಳಕೆಗೆ ಪ್ರಾಮುಕ್ಯತೆ ನೀಡುತ್ತಿದೆ, ತಂತ್ರಜ್ನಾನದಲ್ಲಿ ಕನ್ನಡವನ್ನ ಬಳಸಿ ತಮ್ಮ ಸೇವೆಯನ್ನ ಸಾಮಾನ್ಯ ಕನ್ನಡಗರಿಗೆ ತಲುಪುವಂತೆ ಮಾಡುತ್ತಿವೆ.

ಒಂದು ವರ್ಗಕ್ಕೆ ಮಾತ್ರ ಅರ್ತವಾಗೋ ಬಾಶೆಯನ್ನ ತಂತ್ರಜ್ನಾನದಲ್ಲಿ ಬಳಸಿ, ಆಡಳಿತ ಯಂತ್ರವನ್ನ ಬಹುಸಂಕ್ಯಾತ ಜನರಿಂದ ದೂರಮಾಡಲು ಹೊರಟಿರುವುದು ಎಶ್ಟು ಸರಿ? ದೂರದ ದೇಶದ ಗೂಗಲ್ ಸೇರಿದಂತೆ ಹಲವಾರು ಕಂಪನಿಗಳಗೆ ತಂತ್ರಜ್ನಾನದಲ್ಲಿ ಕನ್ನಡದ ಬಳಕೆಯ ಪ್ರಾಮುಕ್ಯತೆ ಅರ್ತವಾದದ್ದು ನಮ್ಮ ಸರಕಾರಕ್ಕೆ ಏಕೆ ಅರ್ತವಾಗುತ್ತಿಲ್ಲ?

ಶುಕ್ರವಾರ, ಸೆಪ್ಟೆಂಬರ್ 30, 2011

ಮೈಸೂರು ದಸರ ನಾಡ ಹಬ್ಬನ?

ಮೈಸೂರು ದಸರಾ ೪೦೦ ಕ್ಕು ಹೆಚ್ಚು ಆಚರಣೆಗಳನ್ನ ಕಂಡಿದ್ದು ಕೆಲವು ವರ್ಶಗಳಿಂದ ಕರ್ನಾಟಕ ಸರಕಾರ ನಾಡ ಹಬ್ಬವನ್ನಾಗಿ ಆಚರಿಸುತ್ತಿದೆ. ದಸರಾ ಸಮಯದಲ್ಲಿ ವಿದೇಶೀ ಪ್ರವಾಸಿಗರೂ ಸೇರಿದಂತೆ ಲಕ್ಶಾಂತರ ಪ್ರವಾಸಿಗರು ಮೈಸೂರು ದಸರದಲ್ಲಿ ಬಾಗವಹಿಸುತ್ತಾರೆ. ದಸರಾದಲ್ಲಿ ನಮ್ಮ ಕಲೆ ಸಂಸ್ಕ್ರುತಿ ಬಾಶೆಯನ್ನ ಎತ್ತಿ ಹಿಡಿಯಲು ಸರಕಾರ ಕೋಟ್ಯಾಂತರ ಹಣ ಬಳಸುತ್ತೆ.


ಇತ್ತೀಚಿನ ದಿನಗಳಲ್ಲಿ ದಸರದಲ್ಲಿ ಯುವ ದಸರಾ, ಮಕ್ಕಳ ದಸರಾ, ಚಲನಚಿತ್ರೋತ್ಸವ,ಕುಸ್ತಿ, ಗ್ರಾಮೀಣ ದಸರಾ, ಆಹಾರ ಮೇಳ ಹೀಗೆ ಹಲವಾರು ರೀತಿಯ ಕಾರ್ಯಕ್ರಮಗಳ ಮೂಲಕ ಹೆಚ್ಚು ಹೆಚ್ಚು ಜನರು ದಸರಾದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಕಾರ್ಯಕ್ರಮಗಳನ್ನ ರೂಪಿಸಿದೆ. ಆದರೆ..........ಈ ಕಾರ್ಯಕ್ರಮಗಳಲ್ಲಿ ಆಗುತ್ತಿರೋದೇನು?????

ನಾಡ ಹಬ್ಬದಲ್ಲಿ ನಮ್ಮ ನಾಡಿನ ಬಾಶೆ ಕಲೆ ಸಂಸ್ಕ್ರುತಿಯನ್ನ ಎತ್ತಿ ಹಿಡಿಯೋ ಕೆಲ್ಸ ಆಗಬೇಕಿತ್ತು ಆದ್ರೆ ನಮ್ಮ ನಾಡಿನದ್ದಲ್ಲದ ಕಲೆ, ಬಾಶೆ, ಸಂಸ್ಕ್ರುತಿಯನ್ನ ಎತ್ತಿ ಕುಣಿಸುತ್ತಿದ್ದಾರೆ. ಯುವ ದಸರಾದಿಂದ ಹಿಡಿದು ಅನೇಕ ದಸರಾ ಕಾರ್ಯಕ್ರಮಗಳಲ್ಲಿ ಎಲ್ಲಿಹೋದರಲ್ಲಿ ಸಿಗೋದು ಹೊರನಾಡಿನ ಕಲೆ ಸಂಸ್ಕ್ರುತಿಯ ಮೇಲುಗೈ !!!! ಇದು ಯಾಕೆ ಎಂದು ಕೇಳಿದ್ದಕ್ಕೆ ಪೇಸ್ ಬುಕ್ಕಿನಲ್ಲಿ ಇವರಿಂದ ಬಂದ ಉತ್ತರವನ್ನ ನೊಡಿ-

Mysore Dasara 2011 How come taste/likes of people appearing for these shows and also Music show at Palace are appears to be different from views/openions expressed here? If they haven't liked a show by a non-kannadiga, they would have stayed home! The programmes are not ad-hoc but they are published in advance...


ಮೈಸೂರು ದಸರ ನೊಡಲು ಬರುವ ಪ್ರವಾಸಿಗರು ನಮ್ಮ ನಾಡಿನ ಕಲೆ ಸಂಸ್ಕ್ರುತಿಯ ಪರಿಚಯ ಪಡೆಯಲು ಬರುತ್ತಾರಲ್ಲವೇ? ಈ ಪ್ರವಾಸಿಗರಿಗೆ ಸರಕಾರ ದಸರಾದ ಮೂಲಕ ಪರಿಚಯಿಸಲು ಹೊರಟಿರುವುದು ಯಾವ ಸಂಸ್ಕ್ರುತಿಯನ್ನ? ಯಾವ ಬಾಶೆಯನ್ನ? ಯಾವ ನಾಡಿನ ಕಲೆಗಳನ್ನ???ಇವರು ಮೇಲೆ ಹೇಳಿರೋದು ನಿಜವಾಗಿದ್ದಲ್ಲಿ ಸರಕಾರ ದಸರಾವನ್ನ ನಾಡ ಹಬ್ಬವಾಗಿ ಆಚರಿಸಿದ್ದರ ಅವಶ್ಯಕತೆಯೇನಿದೆ? ದಸರಾಕ್ಕೆ ಜನಿಫ಼ರ್ ಲೋಪೇಸ್ ಕರೆಸಿದ್ರೆ ಅತವಾ ಇನ್ಯಾರನ್ನೊ ಕರೆಸಿ ಕ್ಯಾಬರೆ ನಡೆಸಿದ್ರೆ ಅತವಾ ಕುಸ್ತಿ ಪಂದ್ಯಾವಳಿ ಬದಲಿಗೆ WWF championship ನಡೆಸಿದ್ರೆ ಅತವಾ ಜಂಬು ಸವಾರಿ ಜೊತೆಗಿನ ಸ್ತಬ್ದ ಚಿತ್ರಗಳ ಬದಲಿಗೆ ಮಾಡೆಲ್ ಗಳ ಕ್ಯಾಟ್ ವಾಕ್ ನಡೆಸಿದ್ರೆ ಇನ್ನು ಹೆಚ್ಚು ಜನ ಬರಬಹುದೇನೋ..... ಆದ್ರೆ ನಾಡಹಬ್ಬವನ್ನಾಗಿ ಆಚರಿಸೋ ಸರಕಾರಕ್ಕೆ ಯಾವ ಕಾರ್ಯಕ್ರಮ ನಡೆಸುವ ಮೂಲಕ ನಮ್ಮ ಸಂಸ್ಕ್ರುತಿ ಕಲೆ ಬಾಶೆಯನ್ನ ಎತ್ತಿಹಿಡಿಯಬೇಕು ಎನ್ನುವುದು ಗೊತ್ತಿರಬೇಕಲ್ವೇ?

ನಮ್ಮ ನಾಡಿಗೆ ಸಂಬಂದಪಡದ ಕಾರ್ಯಕ್ರಮಗಳನ್ನ ನಡೆಸುವ ಮೂಲಕ ಸರಕಾರ ಪ್ರವಾಸಿಗರಿಗೆ ಬೇರೆ ನಾಡಿನ ಕಲೆ, ಸಂಸ್ಕ್ರುತಿ ಮತ್ತು ಬಾಶೆಯನ್ನ ಪರಿಚಯಿಸಲು ಮತ್ತು ಅವಕ್ಕೆ ಮಾರುಕಟ್ಟೆ ನಿರ್ಮಿಸಲು ಹೊರಟಿರೋದು ಸರಿಯೇ??? ಒಮ್ಮೆ ಯೋಚಿಸಿ...........

ಬುಧವಾರ, ಆಗಸ್ಟ್ 17, 2011

ಬೆಂಗಳೂರು ಇಂಟರ್ನಾಶಿನಲ್ ಸಿಟಿ ಅಂತೆ!


ಕೆಲ ದಿನಗಳ ಹಿಂದೆ ನನ್ನ ಸ್ನೇಹಿತನೊಬ್ಬ ಗಾಡಿ ನಿಲ್ದಾಣವಲ್ಲದ ಜಾಗದಲ್ಲಿ ತನ್ನ ಕಾರನ್ನ ನಿಲ್ಲಿಸಿದ್ದನಂತೆ, ಆ ಕಾರಣಕ್ಕೆ ಬೆಂಗಳೂರು ನಗರ ಟ್ರಾಪಿಕ್ ಪೋಲೀಸರು ನಿಲ್ದಾಣವಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ೧೦೦% ದಂಡ ಕಟ್ಟಬೇಕು ಅಂತ ಒಂದು ಚೀಟಿನ ಕಾರಿಗೆ ಅಂಟಿಸಿ ಹೋಗಿದ್ದರಂತೆ-

ಆ ಚೀಟಿ ನೋಡಿ-



ನನ್ನ ಸ್ನೇಹಿತ ಆ ಚೀಟಿ ತಗೊಂಡು ಪೋಲೀಸ್ ಟಾಣಿಗೆ ಹೋಗಿ ದಂಡ ಕಟ್ಟಿದ ನಂತರ- ಯಾಕ್ ಸಾರ್ ಈ ಚೀಟಿ ಬರಿ ಇಂಗ್ಲೀಶ್ ನಲ್ಲೆ ಇದೆ, ಇದರಲ್ಲಿ ೨೪ ಗಂಟೆ ಒಳಗೆ ದಂಡ ಕಟ್ಟಬೇಕು ಅಂತ ಬೇರೆ ಇದೆ. ಅಕಸ್ಮಾತ್ ಇಂಗ್ಲೀಶ್ ಗೊತ್ತಿಲ್ಲದವರ ಕೈಗೆ ಇದು ಸಿಕ್ಕಿದ್ರೆ ಏನ್ ಗತಿ ಪಾಪ, ಅಂತ ಅಲ್ಲಿನ ಅದಿಕಾರಿನ ಕೇಳಿದ್ದನೆ. ಅದಕ್ಕೆ ಪೋಲೀಸ್ ಅದಿಕಾರಿ ಬೆಂಗಳೂರು ಇಂಟರ್ನಾಶಿನಲ್ ಸಿಟಿ ಅದುಕ್ಕೆ ಇಂಗ್ಲೀಶ್ ನಲ್ಲಿ ಇದೆ ಅಂತ ಹೇಳಿ ಕಳಿಸಿದ್ದಾರೆ.

ಬೆಂಗಳೂರು ಇಂಟರ್ನಾಶಿನಲ್ ಸಿಟಿ ಅಂತ ಇಟ್ಟುಕೊಂಡರೂ ನಮ್ಮ ಬಾಶೆನ ಬಿಡಬೇಕು, ಇಂಗ್ಲೀಶ್ ಬಳಸಬೇಕು ಎಂದೇನಿಲ್ಲ ಅಲ್ವ? ಜಗತ್ತಿನ ಎಲ್ಲಾ ಇಂಟರ್ನಾಶಿನಲ್ ಸಿಟಗಳಲ್ಲಿ ಅವರವರ ಬಾಶೆಗಳಿಗೆ ಪ್ರಾಮುಕ್ಯತೆ ಕೊಡ್ತಾರೆ ಹೊರೆತು ಇಂಗ್ಲೀಶ್ ಅತವಾ ಇನ್ಯಾವುದೋ ಬಾಶೆಗೆ ಅಲ್ಲ ಅಲ್ವ.

ಕರ್ನಾಟಕ ಸರಕಾರದ ಸಂಸ್ತೆಯಾದ ಬೆಂಗಳೂರು ಟ್ರಾಪಿಕ್ ಪೋಲೀಸ್ ಸಂಸ್ತೆ ತನಗೂ ಸರಕಾರದ ಆಡಳಿತದಲ್ಲಿ ಕನ್ನಡದ ನಿಯಮಕ್ಕು ಯಾವುದೇ ಸಂಬಂದವಿಲ್ಲ. ತನಗೆ ಸರಕಾರದ ನಿಯಮ ಅನ್ವಯಿಸೊಲ್ಲ ಅನ್ನೊ ತರ ಎಲ್ಲೆಲ್ಲಿ ಆಗುತ್ತೊ ಅಲ್ಲೆಲ್ಲ ಕನ್ನಡವನ್ನ ತೆಗೆದುಹಾಕೊ ಕೆಲ್ಸ ಮಾಡ್ತಿದೆ, ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಬೆಂಗಳೂರಿನಲ್ಲಿ ಗಾಡಿ ಓಡಿಸಬೇಕು ಅಂದ್ರೆ ಬೆಂಗಳೂರು ಇಂಟರ್ನಾಶಿನಲ್ ಸಿಟಿ, ಇಲ್ಲಿ ಗಾಡಿ ಓಡಿಸಬೇಕು ಅಂದ್ರೆ ಇಂಗ್ಲೀಶ್ ಗೊತ್ತಿರಬೇಕು ಅನ್ನೊ ನಿಯಮ ಹೊರಡಿಸಿದ್ರು ಅಚ್ಚರಿಪಡಬೇಕಾಗಿಲ್ಲ.

ಅಚ್ಚರಿಪಡಬೇಕಾದ ವಿಶಯ ಅಂದ್ರೆ, ತಂತ್ರಜ್ನಾನ ಬಳಸುವ ನೆಪದಲ್ಲಿ, ಸಂಸ್ತೆ ತನ್ನಲ್ಲ ವ್ಯವಸ್ತೆಯನ್ನು ವಲಸಿಗರಿಗೆಂದೇ ನಿರ್ಮಿಸಲು ಹೊರಟಿದೆ. ಕನ್ನಡಿಗರಿಗೆ ತೊಂದರೆ ಆದ್ರು ಪರವಾಗಿಲ್ಲ, ವಲಸಿಗರಿಗೆ ತೊಂದರೆ ಆಗಬಾರದು ಎನ್ನುವಂತಹ ಸಂಸ್ತೆಯ ನಿಲುವು ಕಂಡನಾಹ೯ವಾದುದು. ಸರಕಾರ ಮತ್ತು ಆಡಳಿತದಲ್ಲಿ ಕನ್ನಡದ ಅನುಶ್ಟಾನಕ್ಕೆಂದೇ ಮಾಡಿರುವ ಕನ್ನಡ ಅಬಿವ್ರುದ್ದಿ ಪ್ರಾದಿಕಾರ ಇತ್ತಕಡೆ ಗಮನ ಹರಿಸಬೇಕು.

ಸೋಮವಾರ, ಆಗಸ್ಟ್ 8, 2011

ಆದಾಯ ತೆರಿಗೆ ನಿಯಮಗಳನ್ನ ತಿಳಿಬೇಕಾದ್ರೆ ಹಿಂದಿ/ಇಂಗ್ಲೀಶ್ ಗೊತ್ತಿರಬೇಕಾ?

ಆದಾಯ ತೆರಿಗೆ ಇಲಾಕೆಯವರು ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಕೋಟ್ಯಾಂತರ ರೂಪಾಯಿ ಕರ್ಚು ಮಾಡಿ ರಿಟರ್ನ್ ಪೈಲ್ ಮಾಡೊಕ್ಕೆ ಅವಕಾಶ ಆಗ್ಲಿ ಅಂತ ವ್ಯವಸ್ತೆ ಮಾಡಿದ್ದರು, ಅಶ್ಟು ಕರ್ಚು ಮಾಡಿದ್ರು ಅದು ಬರೆ ಕೆಲವೇ ಕೆಲವು ಮಂದಿಗೆ ಉಪಯೋಗವಾಗುವಂತಿದ್ದುದ್ದು ಮಾತ್ರ ದುರದ್ರುಶ್ಟಕರ. ಹೇಗೆ ಅಂತಿರ? ಮುಂದೆ ಓದಿ......


ಕಳೆದ ವಾರ ನನಗೆ ತಿಳಿದವರೊಬ್ಬರು ಐಟಿ ರಿಟರ್ನ್ ಪೈಲ್ ಮಾಡೊಕ್ಕೆ ಅಂತ ಅರಮನೆ ಮೈದಾನಕ್ಕೆ ಹೋದವರು ದಂಗಾಗಿ ಮನೆಗೆ ವಾಪಸ್ ಬಂದು, ಯಾರಾದ್ರು ಸಿಎ ಗೊತ್ತಿದ್ದ್ರೆ ಹೇಳಪ್ಪ ಅಂತ ನನ್ನ ಕೇಳಿದ್ರು, ಅದಕ್ಕೆ ನಾನು ಸಿಎ ಹತ್ತಿರ ಯಾಕೆ ಹೋಗ್ತಿರಾ, ಸುಮ್ನೆ ಅರಮನೆ ಮೈದಾನಕ್ಕೆ ಹೋಗಿ ಅಲ್ಲಿ ಎಲ್ಲಾ ಆರಾಮಗಿ ಆಗುತ್ತೆ ಅಂದೆ. ಅದಕ್ಕೆ ಅವರು, ತಾವು ಅರಮನೆ ಮೈದಾನಕ್ಕೆ ಹೋಗಿದ್ದಾಗಿ ಮತ್ತು ಅಲ್ಲಿ ಪೈಲ್ ಮಾಡೊದು ಅಶ್ಟು ಸುಲಬ ಅಲ್ಲ ಅಂತ ಹೇಳಿದ್ರು. ಆಮೆಲೆ, ಅವರು ಸಾವಿರಾರು ರೂಪಾಯಿ ದುಡ್ಡು ಕೊಟ್ಟು ಸಿಎ ಕಡೆಯಿಂದ ಐಟಿ ರಿಟರ್ನ್ಸ್ ಪೈಲ್ ಮಾಡಿಸಿದ್ರು.

ಯಾಕೆ ಅರಮನೆ ಮೈದಾನದಲ್ಲಿ ಲಕ್ಯಾಂತರ ರೂಪಾಯಿ ಕರ್ಚು ಮಾಡಿ ಅಬಿಯಾನ ಮಾಡ್ತಿರಬೇಕಾದ್ರೆ ಅಲ್ಲಿ ಕೆಲ್ಸ ಸುಲಬವಾಗಿರ್ಬೇಕಾಲ್ವ ಅಂತ ನಾನು ನನ್ನ ತೆರಿಗೆ ಪೈಲ್ ಮಾಡೊಕ್ಕೆ ಅಂತ ಅರಮನೆ ಮೈದಾನಕ್ಕೆ ಹೋದಾಗ ತಿಳಿತು, ಇಲ್ಲಿ ತೆರಿಗೆ ಪೈಲ್ ಮಾಡೊದು ಅಶ್ಟು ಸುಲಬವಲ್ಲ. ಇದು ಬಲೇ ಕಶ್ಟದ ಕೆಲ್ಸ. ಒಳಗೆ ಹೋಗ್ತಿದ್ದಂಗೆ ನನಗೆ ಅಯ್ಯೋ ಮತ್ತೇನಾದ್ರು ಇಂಗ್ಲೀಶ್ ನವರು ಇಲ್ಲಿ ಆಡಳಿತ ಶುರು ಮಾಡಿದ್ರ ಅನ್ನೊ ಆತಂಕ ಆಯ್ತು. ಯಾಕಂದ್ರೆ ಇಲ್ಲಿನ ವ್ಯವಸ್ತೆಗಳು ಇಂಗ್ಲೀಶ್ ಗೊತ್ತಿರುವವರಿಗೆ ಮಾತ್ರ! ಸರಿ ಇಲ್ಲಿ ಕೆಲವು ಪುಸ್ತಕಗಳನ್ನ ಮಾರ್ತಿದ್ರು ಅಲ್ಲಿ ಹೋಗಿ ನೊಡೋಣ ಕನ್ನಡದ ತೆರಿಗೆ ಗೆ ಬಗೆಗಿನ ಪುಸ್ತಕ ಇದ್ಯ ನೊಡಿದ್ರೆ ಅಲ್ಲಿದಿದ್ದು ಬರಿ ಇಂಗ್ಲೀಶ್ ಮತ್ತು ಹಿಂದಿ ಪುಸ್ತಕಗಳು.

ಇದನ್ನೆಲ್ಲಾ ನೋಡಿದ್ರೆ, ಪ್ರತಿ ವರ್ಶ ಕನ್ನಡಿಗರಿಂದ ಲಕ್ಯಾಂತರ ಕೊಟಿ ಹಣ ಆದಾಯ ತೆರಿಗೆ ಇಲಾಕೆಗೆ ಹೋಗುತ್ತೆ. ಆದ್ರೆ ತೆರಿಗೆ ಬಗ್ಗೆ ತಿಳಿಯೋಕ್ಕೆ ಒಂದೇ ಒಂದು ಪುಸ್ತಕ ಕೂಡ ಕನ್ನಡದಲ್ಲಿ ಇಲ್ಲ, ಅಪ್ಲಿಕೇಶನ್, ಸೂಚನೆಗಳಿರೋ ನಾಮಪಲಕಗಳಲ್ಲಿ ಎಲ್ಲೂ ಕರ್ನಾಟಕದ ಜನ ಬಳಸೋ ಬಾಶೆ ಕನ್ನಡಕ್ಕೆ ಒಂದೇ ಒಂದು ಚಿಕ್ಕ ಸ್ತಾನ ಕೂಡ ಇಲ್ಲ. ತೆರಿಗೆ ರಿಟರ್ನ್ ಪೈಲ್ ಮಾಡಬೇಕು ಅಂದ್ರೆ ಇಂಗ್ಲಿಶ್ ಅತವಾ ಹಿಂದಿ ಗೊತ್ತಿರಬೇಕು ಅನ್ನೊ ತರ ವಾತಾವರಣ ನಿರ್ಮಾಣ ಮಾಡೊಕ್ಕೆ ಹೊರಟಿದೆಯೇ ನಮ್ಮ ಆದಾಯ ತೆರಿಗೆ ಇಲಾಕೆ? ಬಾರತ ಒಕ್ಕೂಟ ವ್ಯವಸ್ತೆಯಲ್ಲಿ ಕನ್ನಡಿಗನಿಗೆ ತನ್ನ ದೇಶದ ಆದಾಯ ತೆರಿಗೆ ನಿಯಮಗಳನ್ನ ತಿಳಿಯಲು ಬೇರೊಂದು ಬಾಶೆ ಕಲಿಯಬೇಕಾದ ವ್ಯವಸ್ತೆ ನಿರ್ಮಿಸಿರುವುದು ಸರಿಯೇ? ಜನರಿಂದ ತೆರಿಗೆ ಒಟ್ಟುಹಾಕೊ ಆದಾಯ ಇಲಾಕೆಯೇ ಕನ್ನಡವನ್ನ ಮರೆತರೇ, ತೆರಿಗೆಯನ್ನ ಬಳೋಸೋ ಇತರೇ ಇಲಾಕೆಗಳಲ್ಲಿ ಕನ್ನಡದ ಕತೇ ಹೇಗೆ ಅನ್ನೊದನ್ನ ಊಹಿಸಿಕೊಳ್ಳಬಹುದು.

ಒಬ್ಬ ಸಾಮಾನ್ಯ ಕನ್ನಡಿಗ ತಾನು ಸುಲಬವಾಗಿ ತೆರಿಗೆ ಬಗ್ಗೆ ಅರ್ತ ಮಾಡಿಕೊಳ್ಳೊಕ್ಕೆ ಮತ್ತು ಸುಲಬವಾಗಿ ತನ್ನ ತೆರಿಗೆ ರಿಟರ್ನ ಪೈಲ್ ಮಾಡೊತರ ವ್ಯವಸ್ತೆಯನ್ನ ಮಾಡೊದ್ರಲ್ಲಿ ನಮ್ಮ ಆದಾಯ ತೆರಿಗೆ ಇಲಾಕೆ ಸಂಪೂರ್ಣವಾಗಿ ವಿಪಲವಾಗಿದೆ. ಇದರಿಂದ ಕನ್ನಡಿಗರು ಬೇರೊಬ್ಬ ವ್ಯಕ್ತಿಯನ್ನ ಅವಲಂಬಿಸುವಂತೆ ಆಗಿರೋದು ನಿಜಕ್ಕೂ ದುರಂತ!

ಮುಂದಿನ ಬಾರಿಯಾದರೂ ಆದಾಯ ತೆರಿಗೆ ಇಲಾಕೆ ತನ್ನ ತಪ್ಪನ್ನ ತಿದ್ದಿಕೊಂಡು ಕನ್ನಡಿಗರ ಸ್ವಾವಲಂಬಿಗಳಾಗಿ ತಮ್ಮ ಆದಾಯ ತೆರಿಗೆ ವಿಶಯವನ್ನ ತಾವೇ ಅರಿತುಕೊಳ್ಳಲು ಅವಕಾಶವಾಗುವಂತೆ ವ್ಯವಸ್ತೆ ಕಲ್ಪಿಸವೇಕೆಂದು ಆಶಿಸುತ್ತೇನೆ.

ಸೋಮವಾರ, ಜುಲೈ 4, 2011

ಪೆದ್ದುತನದ ಪರಮಾವದಿ?

ಸುವರ್ಣ ಕನ್ನಡ ಪಿಲಂ ಅವಾರ್ಡ್ ಕಾರ್ಯಕ್ರಮ ಕಳೆದ ವಾರ ಟಿವಿಯಲ್ಲಿ ನೋಡಿದೆ. ನಿಜಕ್ಕು ಅದ್ಬುತವಾದ ಕಾರ್ಯಕ್ರಮ, ಪರಬಾಶೆಗಳಲ್ಲಿ ಮಾತ್ರ ನಡೆಯುತ್ತಿದ್ದ ಅದ್ದೂರಿ ಕಾರ್ಯಕ್ರಮಗಳು, ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲು ನಡೆಯಲು ಪ್ರಾರಂಬವಾಗಿರೋದು ನಿಜಕ್ಕೂ ಸಂತೋಶಕರ. ಈ ರೀತಿಯ ಕಾರ್ಯಕ್ರಮಗಳು, ಕನ್ನಡ ಚಿತ್ರರಂಗ, ತಾವೇನು ಯಾರಿಗೂ ಕಡಿಮೆಯಿಲ್ಲ ಅನ್ನೊದನ್ನ ಎತ್ತಿಹಿಡಿದಿದೆ....


ಈ ರೀತಿಯ ಕಾರ್ಯಕ್ರಮಗಳನ್ನ ಬಳಸಿಕೊಂಡು ಚಿತ್ರರಂಗದ ಮಾರುಕಟ್ಟೆಯನ್ನು ವಿಸ್ತಾರ ಮಾಡಿಕೊಳ್ಳಬಹುದು. ಈ ಕೆಲಸವನ್ನು ಬೇರೆ ಬಾಶೆಯ ಚಿತ್ರರಂಗದರು ತುಂಬ ಚೆನ್ನಾಗಿಯೇ ಮಾಡಿಕೊಂಡು ಬಂದಿದ್ದಾರೆ, ಆದರೆ ದುರದ್ರುಶ್ಟ ಅಂದ್ರೆ ಕನ್ನಡ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಪರಬಾಶೆಯ ಹಾಡು/ಕುಣಿತದೊಂದಿಗೆ ಪರಬಾಶೆಯ ಚಿತ್ರಗಳಿಗೆ ನಮ್ಮ ರಾಜ್ಯದಲ್ಲಿ ಮಾರುಕಟ್ಟೆ ನಿರ್ಮಿಸೋಕ್ಕೆ ಹೊರಟಿರೋದು ಯಾಕೆ ಅನ್ನೊದು ಗೊತ್ತಾಗುತ್ತಿಲ್ಲ.



ಕಾರ್ಯಕ್ರಮಗಳಲ್ಲಿ- ಕನ್ನಡಿಗರು ಕನ್ನಡ ಸಿನೆಮಾಗಳನ್ನ ನೋಡಿ ಉತ್ತೇಜನ ಕೊಡಬೇಕು....., ಸಿನೆಮಾ ನೋಡೊ ಹವ್ಯಾಸ ಹೊರ ರಾಜ್ಯದಲ್ಲಿರುವಶ್ಟು ನಮ್ಮಲ್ಲಿಲ್ಲ....., ಕನ್ನಡ ಸಿನೆಮಾ ನೋಡೊಕ್ಕೆ ಜನರೇ ಇಲ್ಲ...ಸಿನೆಮಾವನ್ನ ತಿಯೇಟರಿನಲ್ಲೇ ನೋಡಿ....ಹೀಗೆ ಬಾಶಣಗಳನ್ನ ಮಾಡಿ.. ಅದೇ ಕಾರ್ಯಕ್ರಮದಲ್ಲಿ ಪರಬಾಶೆಯ ಹಾಡು/ಕುಣಿತ ನಡೆಸಿದರೆ ಕನ್ನಡಿಗರ ಪಾಡು ಏನಾಗಬಾರದು. ಗಂಟೆಗಟ್ಟಳೆ ಬಾಶಣ ಮಾಡಿ ಚಿತ್ರರಂಗದ ಎಲ್ಲಾ ತೊಡುಕು/ತೊಂದರೆಗಳಿಗೆ ಕನ್ನಡ ಚಿತ್ರ ನೋಡುಗರನ್ನೇ ಹೆಚ್ಚು ಗುರಿಯನ್ನಾಗಿಸಿ, ಪರಬಾಶೆಯ ಚಿತ್ರಗಳಿಗೆ ಕೈಮುಗಿಯುವ ಜನರಿಗೆ ನೈತಿಕತೆಯ ಬಗ್ಗೆ ಅರಿವಿದೆಯೇ?

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದವರೆ ಪರಬಾಶೆಯ ಸಿನೆಮಾಗಳಿಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರೋದು ಇವರಿಗೆ ಕನ್ನಡದ ಬಗ್ಗೆ ಕಳಕಳಿ ಇದೆಯೇ ಎಂಬ ಪ್ರಶ್ನೆ ಹುಟ್ಟೊ ಹಾಗೆ ಮಾಡಿದೆ. ಮತ್ತು ಇದರ ಬಗ್ಗೆ ಚಿತ್ರರಂಗದಲ್ಲಿ ಎಲ್ಲೂ ವಿರೋದ ಕಂಡುಬರದಿರುವುದು ಏಕೆ ಎನ್ನುವುದು ತಿಳಿಯುತ್ತಿಲ್ಲ.


ಕನ್ನಡ ಚಿತ್ರರಂಗಕ್ಕೆ ಮಾರುಕಟ್ಟೆ ಇದೆ, ಇಲ್ಲ ಅಂದಿದ್ರೆ, ವರ್ಶಕ್ಕೆ ೧೫೦ ಕ್ಕು ಹೆಚ್ಚು ಸಿನೆಮಾಗಳು ಬಿಡುಗಡೆ ಆಗ್ತಾ ಇರಲಿಲ್ಲ, ಮತ್ತು ಮೊನ್ನೆ ನಡೆದಂತಹ ಅದ್ದೂರಿ ಕಾರ್ಯಕ್ರಮಗಳು ನಡೆಯುತ್ತಲೂ ಇರುತ್ತಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಮಾರುಕಟ್ಟೆ ಇದೆ ಮತ್ತು ಈ ಮಾರುಕಟ್ಟೆಯನ್ನು ವಿಸ್ತಾರ ಮಾಡಿಕೊಳ್ಳೊ ಅವಶ್ಯಕತೆ ಕೂಡ ಇದೆ. ಇದನ್ನ ಬಿಟ್ಟು ಹಿಂದಿ ಅತವಾ ಇನ್ಯಾವುದೋ ಹಾಡಿಗೆ ಕುಣಿಯೋದರ ಮೂಲಕ ಕನ್ನಡದ ಚಿತ್ರರಂಗದ ಮಾರುಕಟ್ಟೆಯನ್ನ ಕಡಿಮೆ ಮಾಡಿಕೊಳ್ತಿರೋದು ಪೆದ್ದುತನದ ಪರಮಾವದಿ ಅಲ್ವ?

ನಿಮಗೂ ಕನ್ನಡ ಕಾರ್ಯಕ್ರಮದಲ್ಲಿ ಪರಬಾಶೆಯ ಕುಣಿತ ಏಕೆ ಅನ್ನೊ ಪ್ರಶ್ನೆ ಇದ್ರೆ,
ಚಿತ್ರರಂಗದ ಅನೇಕರು ಪೇಸ್ ಬುಕ್ ಸೇರಿದಂತೆ ಅನೇಕ ಸಾಮಾಜಿಕ ತಾಣಗಳಲ್ಲಿ ಸುಲಬವಾಗಿ ಸಿಗ್ತಿದ್ದಾರೆ ಅವರಿಗೆ ಈ ವಿಶಯವನ್ನು ತಿಳಿಸಿ, ಮುಂದಿನ ಕಾರ್ಯಕ್ರಮದಲ್ಲಾದ್ರು ಸರಿ ಮಾಡಿಕೊಳ್ತಾರಾ ನೋಡೋಣ.

ಬುಧವಾರ, ಜೂನ್ 1, 2011

ಕನ್ನಡ ಪ್ರೇಕ್ಷಕರಿಗೆ ತಿಳುವಳಿಕೆ ಇಲ್ವ?


ಡಬ್ಬಿಂಗ್ ಬೇಡ ಎಂದು ಹೇಳುತ್ತಿರುವ ಬಿ ಸುರೇಶ ರವರು ಫೇಸ್ ಬುಕ್ ನಲ್ಲಿ ಕೆಲವು ಡಬ್ಬಿಂಗ್ ಪರವಾದ ಮಾತುಗಳನ್ನು ಪಟ್ಟಿ ಮಾಡಿ ಅದಕ್ಕೆ ಉತ್ತರಿಸಲು ಪ್ರಯತ್ಸಿಸಿದ್ದಾರೆ. ಡಬ್ಬಿಂಗ್ ಪರವಾದ ಹೆಚ್ಚು ಕಡಿಮೆ ಎಲ್ಲಾ ಮಾತುಗಳನ್ನ ಪಟ್ಟಿಮಾಡಿದ್ದಕ್ಕಾಗಿ ಮತ್ತು ಅದಕ್ಕೆ ಅರೋಗ್ಯಕರ ರೀತಿಯಲ್ಲಿ ಉತ್ತರಿಸಲು ಪ್ರಯತ್ಸಿಸಿದ್ದಕ್ಕೆ ನಾನು ಅಬಿನಂದಿಸುತ್ತೇನೆ.

ಡಬ್ಬಿಂಗ್ ಪರವಾದ ಮಾತುಗಳಲ್ಲಿ ಡಬ್ಬಿಂಗ್ ಬೇಕೆ ಬೇಡವೇ ಅನ್ನೊದನ್ನ ಪ್ರೇಕ್ಷಕ(ಮಾರುಕಟ್ಟೆ) ನಿರ್ದರಿಸರಿ ಅನ್ನೋದು ಒಂದು. ಇದೇ ವಾದ ನನ್ನದೂ ಕೂಡ. ಇದೇ ವಿಶಯವಾಗಿ ನನ್ನ ಬ್ಲಾಗಿನಲ್ಲೂ ಸಹ ಒಂದು ಲೇಖನ ಬರೆದಿದ್ದೇನೆ. ಆದರೆ ಡಬ್ಬಿಂಗ್ ಬೇಕೆ ಬೇಡವೇ ಎಂದು ಮಾರುಕಟ್ಟೆ ನಿರ್ದರಿಸೋದು ಸರಿ ಅಲ್ಲ ಅನ್ನೋ ಹಾಗೆ ಬಿ ಸುರೇಶ ರವರು ಹೇಳಿದ್ದಾರೆ. ಇದರ ಬಗ್ಗೆ ಅವರ ಉತ್ತರ ನೋಡಿ-

'ಡಬ್ಬಿಂಗ್ ಬೇಕೆ ಬೇಡವೇ ಎಂದು ಮಾರುಕಟ್ಟೆ ನಿರ್ಧರಿಸಲಿ’ ಎಂದು ಹಲವರು ಹೇಳಿದ್ದಾರೆ. ಇದು ಸರಿಯಾದ ಮಾರ್ಗವಲ್ಲ. ಆ ಉದ್ಯಮದಲ್ಲಿ ಇರುವವರು ಮತ್ತು ಅದನ್ನು ಬಳಸುತ್ತಾ ಇರುವವರ ನಡುವೆ ಅನೇಕ ಚರ್ಚೆಯಾಗಬೇಕು. ಆ ಮೂಲಕ ಪ್ರಯೋಗಗಳು ಆಗಬೇಕು. ಇಲ್ಲವಾದರೆ ಸರಿಯಾಗಿ ಕುಡಿಯುವ ನೀರೇ ಇಲ್ಲದ, ಫ್ಲೋರೈಡ್‌ ಯುಕ್ತ ನೀರು ಕುಡಿದು ನರಳುತ್ತಿರುವವರಿರುವ ಹಳ್ಳಿಗಳಲ್ಲಿ ಧಾರಾಳವಾಗಿ ಪೆಪ್ಸಿ, ಕೋಕಾಕೋಲ ಸಿಗುತ್ತಿರುವಂತೆ ಆಗುತ್ತದೆ. ಯಾವುದೇ ಸರಕಿನ ಲಾಬಾಲಾಭಗಳ ತಿಳುವಳಿಕೆ ಇಲ್ಲದ ಸಮಾಜಕ್ಕೆ ಅಂತಹ ಸರಕನ್ನು ಬಳಸಿ ಎಂದು ಹೇರುವುದು ಆ ಸಮಾಜಕ್ಕೆ ಮಾಡುವ ಅಪರಾಧ ಎಂದು ನೋಮ್‌ ಚಾಮ್‌ಸ್ಕಿ ಯಂತಹ ಹಿರಿಯ ಅರ್ಥಶಾಸ್ತ್ರಜ್ಞರು. ಸಮಾಜ ಚಿಂತಕರು ಮಾಡಿರುವ ಚರ್ಚೆಗಳನ್ನು ಇದಕ್ಕಾಗಿ ಗಮನಿಸಬಹುದು. ಆ ಪುಸ್ತಕಗಳನ್ನು ಓದಲಾಗದವರು ಆಫ್ರಿಕಾದ ಗಿರಿಜನರ ಕಾಡಿನೊಳಗೆ ಬಂದು ಬೀಳುವ ಕೋಕ್ ಬಾಟಲಿಯಿಂದ ಒಂದು ಸಮಾಜವೇ ತಲ್ಲಣಗೊಳ್ಳುವ ಕತೆಯನ್ನುಳ್ಳ ಮಾತಿಲ್ಲದ ಸಿನಿಮಾ ನೋಡಬಹುದು. ಅಂತಹ ಸ್ಥಿತಿ ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬರಬಾರದು. ಹೀಗಾಗಿ ಡಬ್ಬಿಂಗ್ ಬೇಕೆ ಬೇಡವೇ ಎಂಬ ವಿಷಯವನ್ನು ಪ್ರೇಕ್ಷಕರು ಅಥವಾ ಮಾರುಕಟ್ಟೆ ನಿರ್ಧರಿಸಲಿ ಎಂಬ ಮಾತು ಸರಿಯಾಗುವುದಿಲ್ಲ.

ಅವರ ಮಾತಿನ ಮೊದಲಿನಲ್ಲಿ ” ಉದ್ಯಮದಲ್ಲಿ ಇರುವವರು ಮತ್ತು ಅದನ್ನು ಬಳಸುತ್ತಾ ಇರುವವರ ನಡುವೆ ಅನೇಕ ಚರ್ಚೆಯಾಗಬೇಕು ಆ ಮೂಲಕ ಪ್ರಯೋಗಗಳು ಆಗಬೇಕು.” ಎಂದು ಹೇಳಿದ್ದಾರೆ ಇದು ಒಪ್ಪುವಂತಹ ಮಾತೆ, ಚರ್ಚೆ ಆಗಬೇಕೆ ಹೊರೆತು ಉದ್ಯಮದಲ್ಲಿ ಇರುವವರೇ ಬಳಸುವವರಿಗೆ ಏನು ಬೇಕು ಅಂತ ನಿರ್ದಾರ ಮಾಡೋದು ಎಶ್ಟು ಸರಿ? ಬಿ ಸುರೇಶರವರು ಹೇಳಿದ ಹಾಗೆ ಡಬ್ಬಿಂಗ್ ವಿಶಯವಾಗಿ ಯಾವುದಾದರೂ ಚರ್ಚೆ ನಡೆದಿದೆಯೇ ಅತವಾ ಡಬ್ಬಿಂಗ್ ಪ್ರಯೋಗಗಳು ನಡೆದಿದೆಯೇ? ಚರ್ಚೆ ನಡೆಯದೇ...... ಪ್ರಯೇಗ ನಡೆಸದೇ...... ಡಬ್ಬಿಂಗ್ ಬೇಡ ಅನ್ನೊದು ಎಶ್ಟು ಸರಿ?ಡಬ್ಬಿಂಗ್ ಪ್ರಯೋಗ ಆಗಲೇ ಬಾರದು ಅಂತ ಟೊಂಕ ಕಟ್ಟಿ ನಿಂತಿರೋ ಉದ್ಯಮದೊಳಗಿನ ಜನರನ್ನ ಏನನ್ನಬೇಕು

ಇದೇ ಉತ್ತರದ ಇನ್ನೊಂದೆಡೆ ಒಬ್ಬ ಹಿರಿಯ ಅರ್ತಶಾಸ್ತ್ರಜ್ನ ರ ಮಾತನ್ನ ಉಲ್ಲೆಕಿಸುತ್ತಾ ಲಾಬಾಲಾಬಗಳ ತಿಳುವಳಿಕೆ ಇಲ್ಲದ ಸಮಾಜಕ್ಕೆ ಅಂತಹ ಸರಕನ್ನ ಬಳಸಿ ಎಂದು ಹೇರುವುದ ಅಪರಾದ ಅಂತ ಹೇಳಿದ್ದಾರೆ. ಕನ್ನಡ ಪ್ರೇಕ್ಷಕ ಸಮಾಜ ಯಾವುದು ಸರಿ, ಯಾವುದು ತಪ್ಪು ಅನ್ನೊ ತಿಳುವಳಿಕೆ ಇಲ್ಲದ್ದೇ? ಅತವಾ ಕನ್ನಡದ ಪ್ರೇಕ್ಷಕರು ಲಾಬಲಾಬಗಳ ತಿಳುವಳಿಕೆ ಇಲ್ಲದವರೇ? ಪ್ರೇಕ್ಷಕರನ್ನ ತಿಳುವಳಿಕೆ ಇಲ್ಲದವರು ಅನ್ನೊದು ಮತ್ತು ಆ ರೀತಿಯ ವಾಕ್ಯಗಳ ಜೊತೆ ಉಲ್ಲೇಕಿಸಿ ಹೇಳೋದು ಸರಿಯೇ?


ಕನ್ನಡದ ಪ್ರೇಕ್ಷಕರಿಗೆ ಯಾವುದು ಸರಿ ಯಾವುದು ತಪ್ಪು ಅಂತ ನಿರ್ದಾರ ಮಾಡೋ ಸ್ವಾತಂತ್ರ ಮತ್ತು ತಿಳುವಳಿಕೆ ಇದೆ. ಡಬ್ಬಿಂಗ್ ಸಿನೆಮಾ ಬಿಡುವುದರಿಂದ ನಿಜವಾಗಿಯೂ ಪ್ರೇಕ್ಷಕರ ಸ್ವಾತಂತ್ರಕ್ಕೆ ಮತ್ತು ತಿಳುವಳಿಕೆಗೆ ಗೌರವ ನೀಡಿದಂತಾಗುತ್ತದೆ.

ಪ್ರೇಕ್ಷಕನಿಗೆ ಗೌರವ ಮತ್ತು ಸ್ವಾತಂತ್ರ ನೀಡೋ ಮನಸ್ಸು ಡಬ್ಬಿಂಗ್ ವಿರೋದಿಸೋ ಉದ್ಯಮದ ಜನರಿಗೆ ಇದೆಯೇ?

ಸೋಮವಾರ, ಮೇ 2, 2011

ಜಾತ್ರೆ,ಉತ್ಸವ, ಸಮ್ಮೇಳನಗಳ ಆಯೋಜಕರಿಗೆ ಕನ್ನಡದ ಬಗ್ಗೆ ಬದ್ದತೆಯಿದೆಯೇ?


ಸರಕಾರ ಜನರ ಸುಂಕದ ಹಣದಲ್ಲಿ ಕನ್ನಡ ಸಮ್ಮೇಳನಗಳು, ಉತ್ಸವಗಳನ್ನ ನಡೆಸುತ್ತಿದೆ. ಆ ಸಮ್ಮೇಳನಗಳ, ಉತ್ಸವಗಳ ಉದ್ದೇಶ ಸರಿಯಾಗಿಯೇ ಇರಬಹುದು, ಆದ್ರೆ ಆ ಕಾರ್ಯಕ್ರಮಗಳು ನಡೆಯುವಾಗ ನಮ್ಮ ನಾಡಿಗೆ ಸಿಗಬೇಕಾದ ಮನ್ನಣೆ ಮತ್ತು ನಂತರದ ದಿನದಲ್ಲಿ ಕಾರ್ಯಕ್ರಮಗಳಿಂದ ಆಗಬೇಕಾದ ಬದಲಾವಣೆಗಳು ಆಗದಿರುವುದರಿಂದ ನಿಜವಾಗಿಯೂ ಈ ಸಭೆ ಸಮ್ಮೇಳನ, ಉತ್ಸವಗಳಿಗೆ ಕೋಟಿ ಕೋಟಿ ಹಣ ಸುರಿಯುವ ಅವಶ್ಯಕತೆ ಇದಯೇ



ಕೋಟಿ ಕೋಟಿ ಸುರಿದು ನಡೆಸುವ ಸಭೆ ಸಮಾರಂಬಗಳಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಏಳಿಗೆ ಬಗ್ಗೆ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ನಾಡಿನ ಏಳಿಗೆಗೆ/ ನಾಡಿನ ಸಮಸ್ಯೆಯ ಪರಿಹಾರಕ್ಕೆ ಬೇಕಾದ ನಿರ್ಣಯಗಳನ್ನು ತೆಗೆದುಕೊಂಡು, ಆ ನಿರ್ಣಯಗಳ ಜಾರಿಗೊಳಿಸಿದಾಗಲೇ ಆ ಸಮ್ಮೇಳನಗಳು ಯಶಸ್ವಿಯಾದಂತೆ. ಸಮ್ಮೇಳನಗಳ ವೇದಿಕೆಯಲ್ಲಿ ಕನ್ನಡ.. ಕನ್ನಡ ಅನ್ನೊ ಸರಕಾರ, ಕಾರ್ಯಕ್ರಮ ಮುಗಿದ ನಂತರ ಕನ್ನಡವನ್ನೇ ಮರೆಯುತ್ತಿರುವುದು ಸರಿಯೇ? ನಿರ್ಣಯಗಳನ್ನು ತೆಗೆದುಕೊಡು, ನಿರ್ಣಯವನ್ನ ಜಾರಿಗೊಳಿಸದೇ, ಜನ ಸೇರಿದ್ದೇ ಯಶಸ್ವಿಯೆನ್ನುವುದು ಎಶ್ಟು ಸರಿ?

ಇದೀಗ ನಮ್ಮ ಮುಕ್ಯ ಮಂತ್ರಿಗಳ ಪೋಟೋ ಜೊತೆಗೆ, ಕಳೆದ ತಿಂಗ್ಳು ನಡೆದ ವಿಶ್ವ ಕನ್ನಡಿಗರ ಸಮ್ಮೇಳನ ಯಶಸ್ವಿ ಅಂತ ಎಲ್ಲಾ ಕಡೆ ಜಾಹಿರಾತು ನೀಡ್ತಿದ್ದಾರೆ. ನಿಜವಾಗಿಯೂ ವಿಶ್ವ ಕನ್ನಡಿಗರ ಸಮಾವೇಶ ಯಶಸ್ವಿ ಯಾಗಿದಿಯೇ?ಸಮ್ಮೇಳನ ನಡೆದ ಕೆಲವೇ ದಿನದಲ್ಲಿ ನಾಡ ವಿರೋದಿಗಳು ಬೆಳಗಾವಿ ನಗರ ಪಾಲಿಕೆಯಲ್ಲೇ ಮೇಲುಗೈ ಸಾದಿಸಲು ಸಹಾಯ ಮಾಡಿದವರು ಸಮ್ಮೇಳನ ಯಶಸ್ವಿ ಅನ್ನೋದು ಸರಿಯೇ? ೨೦ ಲಕ್ಷ ಜನ ಬಂದಿದಾರೆ ಅಂದ್ರೆ ಅದು ಯಶಸ್ವಿಯೇ? ಗಡಿನಾಡಿನಲ್ಲಿ ನಡೆದ ಸಮ್ಮೇಳನದಿಂದ ಬೆಳಗಾವಿಯಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಬೇಕು, ವಿಬಜನೆಯ ಕೂಗು ನಿಲ್ಲಬೇಕು ಎನ್ನೋ ಆಶಯ ಏನಾಯಿತು?

ಇದರ ಜೊತೆಗೆ ಸರಕಾರ ಗಡಿ ನಾಡಿನ ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ. ಇಲ್ಲಿ ಆಯಾ ಜಿಲ್ಲೆಯ ಕಲಾವಿದರಿಗೆ ಅವಕಾಶ ಸಿಗಬೇಕು ಅಲ್ವ? ಜೊತೆಗೆ ಆಯಾ ಜಿಲ್ಲೆಯ ಕಲೆ ಸಂಸ್ಕೃತಿ ಗೆ ಮನ್ನಣೆ ಸಿಗ್ಬೇಕು ಅಲ್ವ?ಈ ಉತ್ಸವಗಳ ಮೂಲಕ ಸರಕಾರ ಗಡಿ ಪ್ರದೇಶದಲ್ಲಿ ಕನ್ನಡದ ವಾತಾವರಣ ನಿರ್ಮಿಸಲು ಉಪಯೋಗಿಸಿಕೊಳ್ಳಬಹುದಿತ್ತು. ಆದ್ರೆ ಇಲ್ಲಿ ನಡಿತಿರೋದೇ ಬೇರೆ, ಬೀದರ್, ಗುಲ್ಬರ್ಗ ಉತ್ಸವದಲ್ಲಿ ಕಾಟಾಚಾರಕ್ಕೆ ಕನ್ನಡ ಕಾರ್ಯಕ್ರಮ ನಡೆಸಿ, ಹೆಚ್ಚು ಹೆಚ್ಚು ಹಿಂದಿ ಕಾರ್ಯಕ್ರಮ ನ ಆಯೋಜಿಸ್ತಿರೋದು ನೋಡಿದ್ರೆ ಸರಕಾರನೇ ಈ ಉತ್ಸವಗಳ ಮೂಲಕ ಹಿಂದಿ ಬಾಶೆಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರುವುದು ಒಂದು ದುರಂತ.

ಇನ್ನು ನಾಡ ಹಬ್ಬ ಮೈಸೂರು ದಸರ, ಹಂಪಿ ಉತ್ಸವಕ್ಕೆ ಬಂದರೆ, ನಮ್ಮ ನಾಡ ಹಬ್ಬದಲ್ಲಿ ನಮ್ಮ ನಾಡಿನ ವಿಶಯಗಳಿಗೆ ಮನ್ನಣೆ ದೊರೆಯಬೇಕಾದುದ್ದು ನ್ಯಾಯಯುತವಾದುದು, ಇಲ್ಲೇನಾಗ್ತಿದೆ? ಯುವ ದಸರ ಹೆಸರಲ್ಲಿ ಹಿಂದಿ ಕಾರ್ಯಕ್ರಮ ನಡ್ತೆಸಿದ್ದಾರೆ, ಹಂಪಿ ಉತ್ಸವಕ್ಕೆ ಲಕ್ಷಾಂತರ ರೂಪಾಯಿ ಕೊಟ್ಟು ನಮ್ಮ ನಾಡಿಗೆ ಸಂಬಂದವಿಲ್ಲದ ಪರಬಾಶೆಯ ಕಲಾವಿದರಿಂದ ಪರಬಾಶೆಯ ಕಾರ್ಯಕ್ರಮ ನಡೆಸ್ತಿದ್ದಾರೆ.

ಇದನ್ನೆಲ್ಲಾ ನೋಡಿದ್ರೆ ನಿಜವಾಗಿಯೂ ಸಮ್ಮೇಳನ, ಉತ್ಸವ, ಜಾತ್ರೆ, ಹಬ್ಬಗಳನ್ನ ನಡೆಸೋ ಸರಕಾರ ಮತ್ತು ಕಾರ್ಯಕ್ರಮಗಳ ಆಯೋಜಕರಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ನಿಜವಾಗಿಯೂ ಬದ್ದತೆಯಿದೆಯೇ ಎನ್ನೊ ಪ್ರಶ್ನೆ ಹುಟ್ಟುತ್ತೆ.

ಶುಕ್ರವಾರ, ಏಪ್ರಿಲ್ 15, 2011

ಗುಲ್ಬರ್ಗ ಜಿಲ್ಲೆ ಯಾವುದೇ ಕಲೆ/ಕಲಾವಿದರೂ ಇಲ್ಲದಂತಹಾ ಮರುಭೂಮಿಯೇ?


ಕಳೆದ ಕೆಲವು ದಿನಗಳಿಂದ ಕರ್ನಾಟಕ ಸರಕಾರ ಹಲವಾರು ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ. ಈ ಕಾರ್ಯಕ್ರಮಗಳು ಕರ್ನಾಟಕದ ಜನರ ತೆರಿಗೆ ಹಣದಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಆಯಾ ಜಿಲ್ಲೆಯ ಮತ್ತು ನಮ್ಮ ನಾಡಿನ ಕಲಾವಿದರ ಕಾರ್ಯಕ್ರಮಗಳಿಗೆ ಅವಕಾಶವಿರಬೇಕು.ಆದರೆ ಆ ಪ್ರದೇಶದ ಮತ್ತು ನಮ್ಮ ನಾಡಿನ ಇತರೇ ಕಲಾವಿದರನ್ನ ಮರೆತಿರುವ ಸರಕಾರ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಉತ್ಸವಗಳನ್ನ ನಡೆಸುತ್ತಿದೆ.

ಕಳೆದ ಕೆಲವು ದಿನಗಳ ಹಿಂದೆ ನಡೆದ ಬೀದರ್ ಉತ್ಸವದಲ್ಲಿ ಶೇಕಡಾ 90% ರಷ್ಟು ಕಾರ್ಯಕ್ರಮ ನಡೆಸಿಕೊಟ್ಟವರು ಬೀದರ್ ಜಿಲ್ಲೆಗಾಗಲೀ ಅಥವಾ ನಮ್ಮ ನಾಡಿಗೆ ಯಾವುದೇ ಸಂಭಂದವಿಲ್ಲದವರು. ಇದೀಗ ಇದೇ ಏಪ್ರಿಲ್ 15 ರಿಂದ 17 ರ ವರೆಗೆ ಕರ್ನಾಟಕ ಸರಕಾರ ಗುಲ್ಬರ್ಗ ಉತ್ಸವವನ್ನ ಆಯೋಜಿಸಿದೆ. ಯಾವೂದೇ ಅನುಮಾನವಿಲ್ಲದಂತೆ ಈ ಕಾರ್ಯಕ್ರಮಕ್ಕೂ ಸಹ ಪರಭಾಷಿಕರಿಗೆ ಬಹುಪರಾಗ್ ಹೇಳಲಾಗಿದೆ.

ಗುಲ್ಬರ್ಗ ಉತ್ಸವದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಗುಲ್ಬರ್ಗ ಜಿಲ್ಲೆಯ ಒಬ್ಬೇ ಒಬ್ಬ ಕಲಾವಿದನಿದ್ದಂತಿಲ್ಲ! ಗುಲ್ಬರ್ಗ ಜಿಲ್ಲೆ ಯಾವುದೇ ಕಲಾವಿದರೂ ಇಲ್ಲದಂತಹಾ ಮರುಭೂಮಿಯೇ? ಜೊತೆಗೆ ಶಿವರಾಜ್ ಕುಮಾರ್, ಐಂದ್ರಿತಾ ರೇ ರವರನ್ನ ಬಿಟ್ರೆ ಇನ್ನೊಬ್ಬ ಕರ್ನಾಟಕದ ಕಲಾವಿದನಿದ್ದಂತಿಲ್ಲ. ಕಾರ್ಯಕ್ರಮದಲ್ಲಿ ಕಾಟಾಚಾರಕ್ಕೆ ಕರ್ನಾಟಕದ ಕಲಾವಿದರನ್ನ ಕರೆಸಿ ಯಾರೋ ಗುಲ್ಬರ್ಗ ಗೂ ಕರ್ನಾಟಕಕ್ಕೂ ಹತ್ತಿರದ ಸಂಬಂಧವಿರಲಿ ದೂರದ(10000 ಕಿಲೋಮೀಟರ್ ಗಿಂತ ಹೆಚ್ಚು ಅಂದುಕೊಳ್ಳಬಹುದು) ಸಂಬಂದವೂ ಇಲ್ಲದ ಹಿಂದಿಯ ಸುನಿದಿ ಚೌಹಾನ್, ಮಿಕಾ ಸಿಂಗ್, ಶಕ್ತಿಕುಮಾರ್, ಅದ್ನಾನ್ ಸಾಮಿ,ವಾರಸಿ ಸಹೋದರರಿಗೆ ರಾಜಗಂಬಳಿ ಹಾಸಿ ಸ್ವಾಗತ ನೀಡಲಾಗಿದೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ಸರಕಾರವೇ ಹಿಂದಿ ಭಾಷೆಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರುವುದು ದುರಂತ!!!!

ಗುಲ್ಬರ್ಗ ಉತ್ಸವ, ಗುಲ್ಬರ್ಗ ಜಿಲ್ಲೆಯ ಕಲೆ ಸಂಸ್ಖೃತಿಯ ಪ್ರತೀಕವಾಗಬೇಕಾಗಿತ್ತು. ಗುಲ್ಬರ್ಗ ಜಿಲ್ಲೆಯ ಕಲಾವಿದರಿಗೆ, ಕಲೆಗೆ ಪ್ರಾಮುಖ್ಯತೆ ದೊರೆಯಬೇಕಾಗಿತ್ತು.ಆದರೆ ಆಗಿದ್ದೇ ಬೇರೆ. ಖಾಸಗಿಯಾಗಿ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಕಾರ್ಯಕ್ರಮ ನಡೆಸಿದ್ದರೆ ಯಾರೂ ತೆಲೆಕೆಡೆಸಿಕೊಳ್ಳೊ ಅವಶ್ಯಕತೆ ಇರ್ತಿರ್ಲಿಲ್ಲ, ಆದ್ರೆ ನಮ್ಮ ನಾಡಿನ ಕಲೆ/ಕಲಾವಿದರಿಗೆ ಉತ್ತೇಜನ ನೀಡಬೇಕಾದ ಸರಕಾರವೇ ನಮ್ಮ ನಾಡಿನ ಕಲೆ/ಕಲಾವಿರರನ್ನ ಮೂಲೆಗುಂಪು ಮಾಡಿ ಹೊರ ರಾಜ್ಯದ ಕಲೆ/ ಕಲಾವಿದರಿಗೆ ಪ್ರಾಮುಖ್ಯತೆ ನೀಡೋದು ಎಷ್ಟು ಸರಿ? ಕರ್ನಾಟಕದವರ ತೆರಿಗೆ ಹಣದಲ್ಲಿ ಈ ರೀತಿ ಕಾರ್ಯಕ್ರಮ ನಡೆಸೋದ್ರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ, ಕನ್ನಡಕ್ಕೆ ಏನು ಉಪಯೋಗ?

ಕೊನೆಯದಾಗಿ- ಸರಕಾರ ಕೋಟಿ ಕೋಟಿ ಖರ್ಚು ಮಾಡಿ ಕನ್ನಡ ಸಮ್ಮೇಳನಗಳನ್ನ ಆಯೋಜನೆ ಮಾಡುತ್ತೆ ಜೊತೆಗೆ ಕನ್ನಡ ಅಭಿವ್ರುದ್ದಿ ಪ್ರಾಧಿಕಾರ ಗಡಿನಾಡ ಉತ್ಸವ ನಡೆಸಿ ಕನ್ನಡದ ವಾತಾವರಣ ನಿರ್ಮಾಣ ಮಾಡ್ತಿವಿ ಅನ್ನುತ್ತೆ. ಇನ್ನೊಂದೆಡೆ ಅದೇ ಸರಕಾರ ಉತ್ಸವ ನಡೆಯೋ ಪ್ರದೇಶಗಳು ಕರ್ನಾಟಕದಲ್ಲೇ ಇಲ್ಲವೆಂಬಂತೆ, ನಮಗೆ ಸಂಬಂಧವಿಲ್ಲದ ಕಾರ್ಯಕ್ರಮವನ್ನ ಆಯೋಜಿಸಿ ನಾಡಿನ ಜನರನ್ನು ನಾಡಿನಿಂದಲೇ ದೂರವಿಡುವಂತೆ ಮಾಡುತ್ತಿದೆ. ಒಟ್ಟಿನಲ್ಲಿ ಇಲ್ಲಿ ಪೋಲಾಗುತ್ತಿರುವುದು ಕರ್ನಾಟಕದ ಜನರ ತೆರಿಗೆ ಹಣ ಮಾತ್ರ.


ಉತ್ಸವದ ವೆಬ್ ವಿಳಾಸ- http://www.gulbargafestival.com/