ಮಂಗಳವಾರ, ಫೆಬ್ರವರಿ 28, 2012

BMTCಯ ಅದಿಕಾರಿಗಳ ಕನ್ನಡದ ಬಗೆಗಿನ ಕೀಳರಿಮೆ ಕೊನೆಗಾಣಲಿ

ಕಳೆದ ವಾರ ನನ್ನ ಸ್ನೇಹಿತರೊಬ್ಬರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ತೆಗೆ ಪತ್ರ ಬರೆದು ಬಸ್ಸಿನಲ್ಲಿ ಕನ್ನಡದಲ್ಲಿ  ದಾರಿಸೂಚಿಯನ್ನು ಬಳಸಲು ಆಗ್ರಹಿಸಿದ್ದರು ಅದಕ್ಕೆ ಪ್ರತಿಕ್ರಿಯೆಯಾಗಿ ಸಂಸ್ತೆಯವರು ಬರೆದಿರುವ ಉತ್ತರ ಕೆಳಗಿನಂತಿದೆ.
Manager (O) <ctmobmtc@gmail.com> wrote:

Dear Harsha
Your suggestion has been taken well. The information displayed in the signage board (except in BIAL services)  is in  Kannada and in English  language,  to facilitate the kanndigas and also non kannadiga commuters. If any left over will be corrected.

Looking forward for your continued patronage

With regards
CTM(O),
BMTC

ಈ ಪತ್ರದ ಸಾರಾಂಶ ಏನಂದ್ರೆ  ಬೆಂಗಳೂರಿನ ಒಳಗೆ ಸಂಚರಿಸುವ ಮಾರ್ಗದ ದಾರಿಸೂಚಿಯಲ್ಲಿ ಕನ್ನಡ ಮತ್ತು ಇಂಗ್ಲೀಶ್ ಬಳಸ್ತಾರಂತೆ ಆದ್ರೆ ಬೆಂಗಳೂರು ಅಂತರಾಶ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ಸಿನಲ್ಲಿ ಕನ್ನಡ ಬಳಸಲ್ವಂತೆ!



ಬೆಂಗಳೂರಿನಲ್ಲಿ ಹತ್ತಾರು ವರ್ಶಗಳಿಂದ ನೆಲೆಸಿರುವ ಕನ್ನಡಿಗರು ಕನ್ನಡ ಕಲಿತಿರ್ತಾರೆ ಅತವಾ ಕನ್ನಡ ಕಲಿತಾರೆ ಇದಕ್ಕಾಗಿ ಬೆಂಗಳೂರಿನ ಒಳಗೆ ಸಂಚರಿಸುವ ಬಸ್ಸುಗಳಲ್ಲಿ ಕನ್ನಡವೇ ಸಾಕಾಗುತ್ತಿತ್ತು ಇಲ್ಲಿ ಇಂಗ್ಲೀಶ್ ನ ಬಳಕೆ ಬೇಕಾಗೇ ಇರಲಿಲ್ಲ.ಇನ್ನು ವಿಮಾನ ನಿಲ್ದಾಣದ ವಿಶಯಕ್ಕೆ ಬಂದ್ರೆ ಪ್ರವಾಸಿಗರ ಅನುಕೂಲಕ್ಕೆ ಅಂತ  ಇಂಗ್ಲೀಶ್ ಅನ್ನು ಬಳಸಬಹುದಿತ್ತೇ ಹೊರೆತು ಕನ್ನಡ ಬಳಸೋದೇ ಇಲ್ಲ ಅನ್ನೊದು ಇವರಿಗೆ ಕನ್ನಡದ ಬಗೆಗಿನ ಕೀಳರಿಮೆಯನ್ನು ಎತ್ತಿ ತೋರಿಸುತ್ತಿದೆ. ಜಗತ್ತಿನಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ನಗರಗಳಾದ ಪ್ಯಾರಿಸ್ ನಿಂದ ಹಿಡಿದು ಟೋಕಿಯೋ ವರೆಗೆ ಅತವಾ ನಮ್ಮ ದೇಶದ ಚನೈ ಮುಂಬೈ ಎಲ್ಲೇ‌ಹೋದ್ರು ನಗರದ ವಿವಿದ ಬಡಾವಣೆಗೆ ಸಂಚರಿಸುವ ಬಸ್ಸುಗಳಲ್ಲಿ ಸ್ತಳೀಯ ಬಾಶೆಯಿರುತ್ತೆ ಹೊರೆತು ಇಂಗ್ಲೀಶ್ ಬಾಶೆಯ ಬಳಕೆ ಇರುವುದಿಲ್ಲ ಜೊತೆಗೆ ವಿಮಾನ ನಿಲ್ದಾಣ ಅತವಾ ಹೆಚ್ಚು ಪ್ರವಾಸಿಗರು ಓಡಾಡುವ   ಬಸ್ಸುಗಳಲ್ಲಿ ಪ್ರವಾಸಿಗರಿಗೆ ಸಹಾಯವಾಗಲಿ ಅಂತ ಇಂಗ್ಲೀಶ್ ಬಳಸಿರುತ್ತಾರೆ ಹೊರೆತು ತಮ್ಮ ಬಾಶೆಯನ್ನು ಬಿಟ್ಟು ಇಂಗ್ಲೀಶ್ ಬಳಕೆ ಮಾಡಿರಲ್ಲ.

ಇವರ ಉತ್ತರ ನೊಡಿದ್ರೆ ಇವರಿಗೆ ಕನ್ನಡ ಬಳಕೆ ಮಾಡಬಾರದು ಎನ್ನುವ ಮನಸ್ತಿತಿಗಿಂತ ಕನ್ನಡದ ಬಗ್ಗೆ  ಕೀಳರಿಮೆಯ ಮನಸ್ತಿತಿ ಎದ್ದು ಕಾಣಿಸುತ್ತೆ. ಇದೇ ಕೀಳರಿಮೆಯಿಂದಲೇ ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ಸುಗಳಲ್ಲಿ ಕನ್ನಡದ ಹಾಡುಗಳನ್ನು ಹಾಕ್ತಿಲ್ಲ, ವಿಮಾನ ನಿಲ್ದಾಣದ ಬಸ್ಸಿನ ದಾರಿಸೂಚಿ ಕನ್ನಡ ಬಳಸುತ್ತಿಲ್ಲ. ಇವರು ಕನ್ನಡ ಯಾವುದುಕ್ಕು ಅಹ೯ವಲ್ಲದ್ದು ವಿಮಾನ ಏರೋಕ್ಕೆ ಇಂಗ್ಲೀಶ್ ಕಲಿತಿರಬೇಕು ಅಂತ ತಿಳಿದಿದ್ದಾರೆನೋ ಪಾಪ! ಇನ್ನು ೪ ರಿಂದ ೫% ಕನ್ನಡ ಬಾರದವರಿಗೆ ಅನುಕೂಲ ಮಾಡಿಕೊಡುವ ಬರದಲ್ಲಿ ೯೫% ಕನ್ನಡಿಗರಿಗೆ ಅನ್ಯಾಯ ಆಗ್ತಿದೆ ಅಂತನೂ ಗೊತ್ತುಮಾಡಿಕೊಳ್ಳೋಕ್ಕೆ ಆಗದ ಪರಿಸ್ತಿತಿಯಲ್ಲಿ ಅದಿಕಾರಿಗಳು ಇದ್ದಹಾಗಿದೆ. ಇವರ ಕನ್ನಡದ ಬಗೆಗಿನ ಕೀಳರಿಮೆಯನ್ನು ಹೋಗಲಾಡಿಸಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಮಾಡುವ ಕೆಲಸ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ