ಭಾನುವಾರ, ಮಾರ್ಚ್ 18, 2012

ಹಿಂದಿಯನ್ನು ಕನ್ನಡದಲ್ಲಿ ಬರೆದರೆ ಕನ್ನಡವಾಗುತ್ತದೆಯೇ?




ಮೇಲಿರುವ ಎರಡೂ ಚಿತ್ರಗಳು ಕನ್ನಡ ಪತ್ರಿಕೆಗಳಲ್ಲಿ ಸಾಗರೋತ್ತರ ಬಾರತೀಯ ವ್ಯವಹಾರಗಳ ಸಚಿವಾಲಯದವರು ನೀಡಿರುವ ಜಾಹಿರಾತುಗಳು ಈ ಎರಡೂ ಜಾಹಿರಾತುಗಳ ಮೂಲಕ ಸಚಿವಾಲಯವು ಜನರಿಗೆ  ಜಾಗ್ರುತಿ ಮೂಡಿಸುವುದರ ಜೊತೆಗೆ ಮುಕ್ಯವಾದ ಕೆಲವು ವಾಕ್ಯಗಳನ್ನು ಹಿಂದಿಯಲ್ಲಿ ಹೇಳಿ ಅದೇ ವಾಕ್ಯವನ್ನು ಕನ್ನಡದಲ್ಲಿ ಬರೆದಿದ್ದಾರೆ. ಹಿಂದಿಯನ್ನು ಕನ್ನಡದಲ್ಲಿ ಬರೆದಾಕ್ಷಣ ಅದು ಕನ್ನಡವಾಗುವುದೇ ಅತವಾ ಜನರಿಗೆ ಆ ವಾಕ್ಯದ ಅರ್ತ ಅರಿವಿಗೆ ಬರುವುದೇ? ಈ ರೀತಿ ಕನ್ನಡದಲ್ಲಿ ಹಿಂದಿಯ ವಾಕ್ಯವನ್ನು ಬರೆದು ಅತವಾ ಸಂಪೂರ್ಣವಾಗಿ ಹಿಂದಿಯಲ್ಲೇ ಬರೆದು ಕನ್ನಡ ಪತ್ರಿಕೆಗಳಲ್ಲ್ಲಿ ಪ್ರಕಟಿಸುತ್ತಿರುವುದು ಇದೇ ಮೊದಲೇನಲ್ಲ. ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಜಾಹಿರಾತುಗಳ ಅತವಾ ಹಿಂದಿಯ ವಾಕ್ಯವನ್ನು ಕನ್ನಡದಲ್ಲಿ ಬರೆದ ಜಾಹಿರಾತುಗಳ ಸುರಿಮಳೆನೇ ಆಗ್ತಿದೆ.

ಮತ್ತೆ ಮತ್ತೆ ಕನ್ನಡಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹಿರಾತು ನೀಡ್ತಿರೋದನ್ನ ನೋಡಿದ್ರೆ, ಇವು ಏನೋ ಗೊತ್ತಿಲ್ಲದೇ ಆಗಿರೋ  ತಪ್ಪುಗಳಲ್ಲ,  ಈ ಕೆಲ್ಸ ಬಹಳ ವ್ಯವಸ್ತಿತವಾಗಿ ನಡಿತಿದೆ ಅನ್ನೊದು ಗೊತ್ತಾಗದ ವಿಶಯವೇನಲ್ಲ,   ಈ ವ್ಯವಸ್ತಿತ ಸ೦ಚು ನಿದಾನವಾಗಿ ಹಿಂದಿಯನ್ನು ಕರ್ನಾಟಕದಲ್ಲಿ ನುಗ್ಗಿಸುವ ಪ್ರಯತ್ನ ಎಂದು ಹೇಳಬಹುದು. ಹಿಂದಿ ಬಲ್ಲವರಿಗೆ ಮಾತ್ರ ಸೌಲಬ್ಯಗಳು ಸಿಗುವಂತೆ ಮಾಡಲೆಂದೇ ಇಂದು ಕೆಲವು ಕಡೆಗಳಲ್ಲಿ ಹಿಂದಿ ಬಳಸಿ, ಮುಂದೊಂದು ದಿನ ಸಂಪೂರ್ಣವಾಗಿ ಹಿಂದಿ ಬಳಸುವ ಹುನ್ನಾರ ನಡೆಸುತ್ತಿರುವುದು. ಇಂದು ಕೆಲವು ಜಾಹಿರಾತುಗಳಲ್ಲಿ ಹಿಂದಿಯನ್ನು ಹಾಕುತ್ತಿರುವವರು ಮುಂದೊಂದು ದಿನ ಎಲ್ಲಾ ಜಾಹಿರಾತುಗಳಲ್ಲಿ ಸಂಪೂರ್ಣ ಹಿಂದಿಯನ್ನು ಬಳಸಿ ಅದರ ಮೂಲಕ ಹಿಂದಿ ಬಲ್ಲವರಿಗೆ ಮಾತ್ರ ಸೌಲಬ್ಯಗಳು ದೊರಕುವಂತೆ ಆದರೆ ಅದಕ್ಕೆ ಆಶ್ಚರ್ಯಪಡಬೇಕಾಗಿಲ್ಲ. 

ಪ್ರಜಾಪ್ರಬುತ್ವದಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರೋ ಸರಕಾರನೇ ಹಿಂದಿಯೇತರ ನಾಡಿಗೆ ಅಕ್ರಮವಾಗಿ ಹಿಂದಿಯನ್ನು ನುಗ್ಗಿಸಿ ಹಿಂದಿ ಗೊತ್ತಿದ್ರೆ ಮಾತ್ರ ಸೌಲಬ್ಯ ಅನ್ನೊ ಹಾಗಿನ ವ್ಯವಸ್ಥೆ ನಿರ್ಮಾಣ ಮಾಡೊಕ್ಕೆ ಹೊರಟಿರೋದು ಸರಿನಾ? ಪ್ರಜಾಪ್ರಬುತ್ವದಲ್ಲಿ ಹಿಂದಿಯೇತರರೂ ಹಿಂದಿ ಬಾಶಿಕರಶ್ಟೆ ಹಕ್ಕನ್ನು ಹೊಂದಿಲ್ಲವೇ?

ಗುರುವಾರ, ಮಾರ್ಚ್ 15, 2012

ಕನ್ನಡದಲ್ಲಿ ಗ್ರಾಹಕಸೇವೆ ಕನ್ನಡಿಗನ ಹಕ್ಕು




ಮಾರ್ಚ್ ೧೫ ವಿಶ್ವ ಗ್ರಾಹಕ ದಿನ, ಗ್ರಾಹಕ ನೀಡುವ ಹಣಕ್ಕೆ ತಕ್ಕ ಸರಕನ್ನು ಪಡೆಯುವ ಹಕ್ಕು ಗ್ರಾಹಕನಿಗಿದೆ. ಅದು ಬರಿ ಅಳತೆ ಗುಣಮಟ್ಟ ತೂಕ ಕ್ಕೆ ಮಾತ್ರ ಸೀಮಿತವಾಗಿಲ್ಲ. ಕನ್ನಡದಲ್ಲಿ ಗ್ರಾಹಕಸೇವೆ ಪಡೆಯುವುದು ಕನ್ನಡಿಗರ ಹಕ್ಕು ಕೂಡ. ಇದನ್ನು ಪ್ರತಿಯೊಬ್ಬ ಕನ್ನಡಿಗರು  ಅರಿಯಬೇಕಿದೆ.

ಇಂದಿರುವ ಕೆಲವು ಬಗೆಯ ಕಾನೂನಿನಲ್ಲಿ ಗ್ರಾಹಕ ಸೇವೆಯಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆಯನ್ನು ನೀಡಲೇಬೇಕೆಂದು ಹೇಳುತ್ತವೆ ಉದಾಹರಣೆಗೆ
೧. ಕರ್ನಾಟಕದಲ್ಲಿ ವ್ಯವಹರಿಸುವ ಎಲ್ಲಾ  ಬ್ಯಾಂಕ್ ಗಳೂ ಕನ್ನಡದಲ್ಲಿ ಗ್ರಾಹಕ ಸೇವೆ ನೀಡಬೇಕೆಂಬ ಕಾನೂನನ್ನು RBI ರೂಪಿಸಿದೆ. ಈ ಕಾನೂನಿನ ಆದಾರದ ಮೇಲೆ ಕನ್ನಡಿಗರು ಕನ್ನಡದಲ್ಲೆ ಎಲ್ಲಾ ತರದ ಬ್ಯಾಂಕ್ ವ್ಯವಹಾರಗಳನ್ನು ನಡೆಸಬಹುದು. ಅಂದರೆ ಕಾತೆ ತೆರೆಯುವ ಅರ್ಜಿಯಿಂದ ಹಿಡಿದು ಚೆಕ್ ನಲ್ಲಿ ಕನ್ನಡದಲ್ಲಿ ಬರೆಯುವ ವರೆಗೆ ಎಲ್ಲೆಡೆ ಕನ್ನಡವನ್ನು ಬಳಸಬಹುದು.
೨.  ಕರ್ನಾಟಕ ಸರಕಾರ ಆಡಳಿತದಲ್ಲಿ ಕನ್ನಡವನ್ನು ಬಳಸಬೇಕೆಂಬ ನಿಯಮವನ್ನು ಜಾರಿಗೊಳಿಸುವುದರ ಮೂಲಕ ಸರಕಾರಿವಲಯದಲ್ಲಿ ಜನರಿಗೆ ಎಲ್ಲಾ ಗ್ರಾಹಕ ಸೇವೆಗಳು ಕನ್ನಡದಲ್ಲಿ ಸಿಗುವಂತೆ ಮಾಡಿದೆ.
೩. ಇನ್ನು "Consumer Protection Act" ನ ಮೂಲಕ ಕೂಡ ಕನ್ನಡಿಗನು ಕನ್ನಡದಲ್ಲಿ ಗ್ರಾಹಕಸೇವೆ ಪಡೆಯಲು ಅನುವಾಗುವ ಅಂಶಗಳಿವೆ -
  • (a) the right to be protected against the marketing of goods and services which are hazardous to life and property- ಅಂದರೆ ಈ ಕಾನೂನಿನ ಆದಾರದ ಮೇಲೆ ಒಬ್ಬ ಗ್ರಾಹಕನಿಗೆ ತನ್ನ ಜೀವಕ್ಕೆ ಅಥವಾ ತನ್ನ ಆಸ್ತಿಗೆ ಹಾನಿ ತರಬಹುದಾದ ಸಾಮಗ್ರಿಗಳ ಮಾರಾಟದಿಂದ ರಕ್ಷಣೆ ಪಡೆಯುವ ಹಕ್ಕು ಇದೆ. ಅಂದರೆ ನಾವು ದಿನ ನಿತ್ಯ ಬಳಸುವ ಅಡುಗೆ cylinder ಗಳ ಮೇಲೆ ಅಪಾಯದ ಸೂಚನೆ, ದೀಪಾವಳಿಯಲ್ಲಿ ಸುಡುವ ಪಟಾಕಿಗಳ ಸೂಚನೆಗಳು , ಔಷಧಿಗಳ ಬಳಕೆಯ ಬಗ್ಗೆ ಮಾಹಿತಿ, ವಿಮಾನಗಳಲ್ಲಿ , ರೈಲುಗಳಲ್ಲಿ ,ಸುರಕ್ಷತಾ ಸೂಚನೆಗಳು ಜೊತೆಗೆ ಇನ್ನೂ ಅನೇಕ ವಿಶಯಗಳಲ್ಲಿ ಕನ್ನಡಿಗರು ಕನ್ನಡದಲ್ಲೆ ಗ್ರಾಹಕ ಸೇವೆ ಪಡೆಯುವ ಹಕ್ಕನ್ನು ಹೊಂದಿದ್ದಾರೆ
  • (b )the right to be informed about the quality, quantity, potency, purity, standard and price of goods or services, as the case may be so as to protect the consumer against unfair trade practices-ಕನ್ನಡಿಗನಿಗೆ ತಾನು ಕೊಳ್ಳುತ್ತಿರುವ ಸಾಮಗ್ರಿಯ ಬಗೆಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವ ಹಕ್ಕು ಇದೆ. ಅದು ಒಂದು ಶಾಂಪೂ ಆಗಿರಬಹುದು, ಟೀವಿ, ವಾಶಿಂಗ್ ಮಶಿನ್, ಮೊಬೈಲ್, ಕಾರು, ಬೈಕು ಆಗಿರಬಹುದು , ready to eat ಪ್ಯಾಕೆಟ್ ಗಳು ಆಗಿರಬಹುದು, ಅಕ್ಕಿ, ಬೇಳೆ ಕಾಳುಗಳು ಆಗಿರಬಹುದು ಕೊಳ್ಳುವ ಸಾಮಗ್ತಿಯ ಬಗೆಗಿನ ಎಲ್ಲಾ ಮಾಹಿತಿ ಕನ್ನಡದಲ್ಲಿರಬೇಕು.
ಹೀಗೆ ಹಲವಾರು ರೀತಿಯ ಕಾನೂನುಗಳು ಗ್ರಾಹಕ ಸೇವೆಯಲ್ಲಿ ಕನ್ನಡ ಸಿಗಬೇಕೆನ್ನುವುದನ್ನ ಹೇಳಿದರೂ ಇಂದಿಗೂ ಕಾನೂನಿನ ಅನುಶ್ಟಾನವಾಗಿಲ್ಲದಿರುವುದನ್ನು ನೋಡಿದ್ದೇವೆ. ಕನ್ನಡಿಗರು ತಮ್ಮ ಹಣ ತಮ್ಮ ಹಕ್ಕು ಎನ್ನುವುದನ್ನ ಅರಿತು ಕನ್ನಡದಲ್ಲಿ ಗ್ರಾಹಕಸೇವೆಗೆ ಒತ್ತಾಯ ಮಾಡಿದಲ್ಲಿ, ಗ್ರಾಹಕಸೇವೆಯಲ್ಲಿ ಕನ್ನಡ ಸಿಗುವುದರಲ್ಲಿ ಅನುಮಾನವಿಲ್ಲ.

ಜೊತೆಗೆ ಸರಕಾರ ಕೂಡ ಗ್ರಾಹಕ ಸೇವೆಯ ಕಾನೂನಿನಲ್ಲಿ ಅಳತೆ, ಗುಣಮಟ್ಟಯ ಜೊತೆಯಲ್ಲಿ ಕನ್ನಡವೂ ಮುಕ್ಯವಾದುದು ಎನ್ನುವುದನ್ನು ಮನಗಂಡು, ಗ್ರಾಹಕ ಸೇವೆಯಲ್ಲಿ ಕನ್ನಡ ಸಿಗುವಂತೆ ಇನ್ನೂ ಪರಿಣಾಮಕಾರಿಯಾದ ಕಾನೂನನ್ನು ರೂಪಿಸಲಿ.